Saturday 22 September 2012

ನೀ ಮಹಾತ್ಮೆ!!!

















ಸಣ್ಣ ಚುಚ್ಚಿಗೆ ನೆತ್ತರು ಹರಿವುದು
ಹೆಜ್ಜೆ ಮುಂದಿಡಲು ಹಿಂಜರಿಯುವುದು
ಅಷ್ಟು ಸೂಕ್ಷ್ಮ ಬದುಕಿನ ಪಾದ
ಹೇಗೆ ನೀ ಸಹಿಸಿರುವೆ ಪ್ರತಿ ಹೆಜ್ಜೆಗೂ ಇದ?

ದಾರಿಯುದ್ದಕೂ ಜ್ವಾಲೆಯಾಕ್ರಮಣ
ತಪ್ಪಿಸಿ ನಡೆವುದೇ ಸಾಹಸಕ್ರಿಯೆ
ತಾಳ ತಪ್ಪಿ ಸಿಕ್ಕಿಕೊಂಡರೆ ಸುಡುವುದು
ಹೇಗೆ ನೀ ಹೊತ್ತಿರುವೆ ಕೆಂಡದ ಪರ್ವತ ಶಿರದ ಮೇಲೆ?

ಗೀಚಿದ ಹಣೆಬರಹದ ಕಹಿ ಸಾಲು
ಸವಿಯಲು ಎಷ್ಟು ಕಷ್ಟ ಕೊಡುವುದು?!!
ಹಾಗೊಮ್ಮೆ ಹೀಗೊಮ್ಮೆ ಎದುರಾಗುವುದು ಸಧ್ಯ!!
ಹೇಗೆ ನೀ ಸವಿದಿರುವೆ ಬರೇ ಕಹಿಗಳ ಪಾಲು?

ಆಗಾಗ ಉರುಳುವುದು ಸುಡುವ ಕಂಬನಿ
ಬಿಟ್ಟ ಗಾಯಗಳ ಮೆಟ್ಟಲಸಾಧ್ಯ
ಆತಂಕದಲೇ ಜಾರ ಬಿಟ್ಟು, ತನ್ಪಾಡಿಗುರುಳಿದರೆ ಅದುವೇ ಪುಣ್ಯ
ಹೇಗೆ ನೀ ವೋರೆಸಿರುವೆ, ಕೀವು ಗಾಯಗಳ ಹಾದ ಹನಿಗಳ?

ಕಾರಣಗಳ ಸರಪಳಿ ಮನಸ್ಸಿಗೆ
ಮುನಿಸೆಂಬುದು ರೆಪ್ಪೆ ಬದಿದಷ್ಟೇ ಚಂಚಲ
ಸಣ್ಣ ಅಳುಕಿಗೆ ಜಾರಿ ಪುಡಿಯಾಗಬಹುದು ಮನ
ಹೇಗೆ ಹಿಡಿದಿಟ್ಟೆ ಸಂಬ್ಹಾಳಿಸುತ ಬಾಳಿನೆಲ್ಲ ಗೊಂದಲಗಳ?

ಅದಕಾಗಿಯೇ ಕರೆವ ಆಸೆಯಾಗಿದೆ, ನೀ ಮಹಾತ್ಮೆಯೆಂದು!!!!

--ರತ್ನಸುತ

 

2 comments:

  1. tatparya...sooper....but something missing....
    alalli swalpa salugalanna suchi goLisabhahudu

    ReplyDelete
    Replies
    1. hoon maga.. yaako nangoo haage anstu... aadre adara paadige hariyoke bitte... :(

      Delete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...