Thursday 24 October 2013

ಒಂದ್ಚೂರ್ ಇತ್ಲಾಗ್ಕೇಳಮ್ಮಿ

ಕಾದಿದ್ದೆ ದಾರೀಲಿ
ನಿಂಗೋಸ್ಕ್ರ ಅಂತ
ಗಡಿಯಾರ ಹಿಂದಿತ್ತಾ ?
ತಡ್ವಾಗ್ ಬಂದೆ !!
ಹೂ ಕೊಟ್ಟು ಕಾಲೂರಿ
ನಾ ನಾಚಿದ್ದೆ
ನೀ ಕಾಲು ಬೆರ್ಳಲ್ಲಿ
ಏನೋ ಬರಿತಿದ್ದೆ !!

ಮನ್ಸಲ್ಲಿ ಏನೋ
ಇದ್ದಂಗಿತ್ತು
ಆದ್ರೂ ಓಡೋದೆ
ಏನೂ ಹೇಳ್ದೀರ
ನಂಗೂ ಏನೂ
ತೋಚ್ದೆ ಹೋಯ್ತು
ನನ್ಪಾಡಿಗ್ ಹಿಂದಿರ್ಗ್ದೆ
ಸುಮ್ಕೆ ಕಲ್ದೀರ

ಆವತ್ತು ಏನಾರ
ಮಾತಾಡ್ಬೇಕಿತ್ತು
ಇತ್ಯರ್ಥ ಆಗೋದು
ಎರ್ಡ್ರಲ್ಲೊಂದು
ಏಟಾದ್ರೂ ಕೊಟ್ಟಿದ್ರೆ
ನೆಮ್ದಿ ಇರ್ತಿತ್ತು
ನಾನಂದ್ರೆ ನಿಂಗಿಷ್ಟ
ಇಲ್ಲ ಅನ್ಕೊಂಡು

ಬದ್ಕೇ ಪ್ರಶ್ನೆ
ಆಗ್ಬಿಟೈತಮ್ಮಿ
ಬ್ಯಾಸ್ರ ಉಸ್ರಾಟುಕ್ಕೂ
ಈಗೀಗ
ನೀನೆ ನೋಡೇಳು
ಬಾ ಇತ್ಲಾಗ್ಚೂರು
ವಾಸಿ ಆಯ್ತಿಲ್ಲ
ಯಾವ್ದೀ ದೊಡ್ರೋಗ ?!!

              -- ರತ್ನಸುತ

2 comments:

  1. ರತ್ನಸುತನ ಮತ್ತೊಂದು ರತ್ನ... ಇಷ್ಟ ಆಯ್ತು!

    ReplyDelete
  2. ಇತ್ಯರ್ಥ ಆಗೋಗ್ಲಿ ವಸೀ ಬ್ಯಾಗನೇ...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...