Friday 17 October 2014

ಚಿಟ್ಟೆ

ವೇಘ ಕಠೋರ
ಪ್ರಾಭಲ್ಯ ಕಠೋರ
ಭಾರ ಕಠೋರ
ಆ ಚಿಟ್ಟೆ ಸುರಕ್ಷತೆ ಕಂಡಿದ್ದು ಮೃದುತ್ವದಲ್ಲಿ
ಹಗುರಾದ ಅಲೆ-ಅಲೆಯ ಹಾರಾಟದಲ್ಲಿ
ಅಲ್ಲಿ ದಟ್ಟ ಮರವ ಸೀಳಿ ಛಿದ್ರ-ಛಿದ್ರಗೊಂಡ
ಬೆಳಕು ಹಾಸಿದ ಹೆದ್ದಾರಿಯ ಅಡ್ಡ ರಸ್ತೆಯಲ್ಲಿ
ನಮ್ಮಾಳ್ವಿಕೆಯ ಸಾಮ್ರಾಜ್ಯಗಳು ತೆರೆದುಕೊಳ್ಳುತ್ತವೆ
ನಾ ಅಲ್ಲಿ ಶಕ್ತಿ ಇಮ್ಮಡಿಗೊಳಿಸಿ ನಿಲ್ಲುತ್ತೇನೆ
ಪ್ರತ್ಯುತ್ತರವಾಗಿ ಆ ಸಂಭಾವಿತ ಚಿಟ್ಟೆ
ಎಂದಿಗಿಂತಲೂ ಹೆಚ್ಚು ಮೆರುಗಲ್ಲಿ ಶರಣಾಗಿ
ನನ್ನ ಒರಟು ಕಾಪಿನ ಮೇಲೆ ಹಾರಿ ಕಾಲೂರುತ್ತದೆ
                                           -- ರತ್ನಸುತ

1 comment:

  1. ಒಮ್ಮೊಮ್ಮೆ ಅಸಲು ಗೆಲ್ಲುವುದೇ ಮೃದುತ್ವ.

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...