Tuesday, 14 August 2012

ಪ್ರತಾಪನ ಹುಟ್ಟು ಹಬ್ಬಕೆ

ಬರೆಯಲಾರದೆ ಅಲ್ಲವೋ ಬರೆಯದಿದ್ದುದು
ಬರೆಯಬೇಕೆನಿಸಿದ್ದವೆಲ್ಲವೂ ಬರೆಯಲಾಗದು
ನಿನಗೆ ಈ ದಿನ ವಿಶೇಷವಾದುದು, ಮರೆಯಬಾರದು
ಜೋಪಾನವಾಗಿ ಪದಗಳ ಜೋಡಿಸಿ ಹೀಗೆ ಬರೆದದ್ದು

ಇಷ್ಟ ಪಡದವ ಇಚ್ಛಿಸಿರುವೆ, ಏನು ಆಶ್ಚರ್ಯ!!!
ಎಷ್ಟೇ ಆದರು ನಿನಗೆ ಬರೆದದು ನಿನ್ನದೇ ಕಾವ್ಯ
ನಿನ್ನ ಕುರಿತು ಬರೆಯಲಾಯಿತು ಅದುವೇ ನನ್ನ ಪುಣ್ಯ
ನಿನ್ನದೆಂಬುವ ಕಾರಣವಿದೆ ಅದುವೇ ನನ್ನ ಧೈರ್ಯ

ಕಾವ್ಯ ರೂಪಕ ಆಶೆಯಕೆ ನೀ ಹಂಬಲಿಸಿರುವೆ
ನನ್ನ ಬೆರಳಿಗೆ ಮತ್ತೆ ಬರೆಯುವ ಕೆಲಸ ಕೊಟ್ಟಿರುವೆ
ನಿನ್ನ ಖುಷಿಯಲಿ ಬಾಗಿಯಾಗಿದೆ ನನ್ನ ಈ ಕವನ
ಹರ್ಶೋದ್ಘಾರಕೆ ಕಾರಣವಾಯಿತು ನಿನ್ನ ಜನ್ಮ ದಿನ

ಇಷ್ಟು ಬರೆದೆ, ಇಷ್ಟಕೆ ಮುಗಿಯಿತೆಂದಲ್ಲ "ಮಗ"
ಬಯಸುತಿರು ನೀ ನನ್ನ ಬರಹ ತೀರ ಆಗಾಗ
ಮೊದಲ ವರ್ಷದ ಹುಟ್ಟುಹಬ್ಬಕೆ ನನಗೆ ಸಂತೋಷ (ನಿನ್ನ ಶುಭಾಶಯಕೆ ನನ್ನ ಕವನದ ಮೊದಲ ವರ್ಷ)
ನಿನ್ನ ಖುಷಿಗೆ ಎಂದೂ ಮುಂದು ನನ್ನ ಸಹವಾಸ........

                                                              --ರತ್ನಸುತ


No comments:

Post a Comment

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ ನೀ ಖಂಡಿತ ಈ ಗ್ರಹದವಳಲ್ಲ ನಕ್ಷತ್ರಗಳ ಊರು? ಬಂಗಾರದ ಸೂರು? ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ ಆಗೋ ಆ ಹಣೆಯಲ್ಲಿ ಬೆವರು ಜಿನು...