Thursday 30 August 2012

ಜನನದೊಳ್ ಸಂಪೂರ್ಣಾರ್ತಿ

ನವಿಲ ಎಳೆಗರಿಯ ಬಣ್ಣದ ಲೇಪ
ಪುಟ್ಟ ಬಳ್ಳಿಯಲಿ ಮೊಗ್ಗಿನ ರೂಪ
ಯಾರ ಗುರುತಿಸದ ಮುಗ್ಧ ಗರ್ವ
ಬಿಟ್ಟ ಪುಟ್ಟ ಕಣ್ಣೊಳಗೆ ಪರ್ವ
ಸಣ್ಣ ಧನಿಯ ಹಿಡಿದೊಂದು ಅಳುವು
ಇರುವೆಯನ್ನು ನೋಯಿಸದ ನುಲಿವು
ನುಸುಳಿ ಬಂದ ಆ ಹೊನ್ನ ಕಿರಣ
ಸೋಕಿ ಪಡೆಯಿತೆ ಧನ್ಯ ಗೆಲುವು
ಸೋಕಿದರೆ ಸವೆಯುವ ಮೃದುತ್ವ
ಜನನದಿ ಹೊಸ ಸಂಭಂದದ ಸತ್ವ
ಎಲ್ಲೆಡೆ ಪರಸಿದೆ ಹರ್ಷೋದ್ಘಾರ
ಪೂರ್ಣಗೊಂಡಿತು ಪುಟ್ಟ ಸಂಸಾರ!!!

                                    --ರತ್ನಸುತ


Saturday 18 August 2012

ಕಾರ್ಮಿಕ - ನಿಜ ಶ್ರಮಿಕ















ದುಡಿಮೆ ಬೆವರು ಹರಿಯಿತಲ್ಲಿ, ನೆತ್ತಿಯಿಂದ ಕತ್ತಿಗೆ
ಹರಿದ ಅರಿವು ಇರದೆ ಅಲ್ಲಿ, ವೋರೆಸಿಕೊಂಡು ಮೆಲ್ಲಗೆ
ಇಟ್ಟ ತೊಟ್ಟು ಮಣ್ಣಿನೊಳಗೆ ಐಕ್ಯವಾಯ್ತು ಆದರು
ಮುಂದುವರೆಯಿತಲ್ಲಿ ಹಿಂದೆ ಸಾಲು, ಸಾಲು ಉರಿಬೇವರು

ಚಿಂತಿಸಲು ಇರದ ಸಮಯ ನುಂಗಿ ಹಾಕಿ ಬದುಕನು
ಸದಾ ತಾ ಉರಿದು ಕರಗಿ ಪರರಿಗಿಟ್ಟು ಬೆಳಕನು
ಕೋಪವ ವಿಕೋಪಿಸದೆ ಮತ್ತಷ್ಟು ಹುರುಪು ತುಂಬಿ
ರೂಪವಿರದ ಬಾಳ ನಿರೂಪಿಸುವ ಯತ್ನ ಸಾಗಿದೆ

ಕೊಟ್ಟ ಕೈ ಮಾಸಿತ್ತು, ಬಿಟ್ಟ ಗುರುತು ಸೂಸಿತ್ತು-
-ಕೆಸರೊಳಗಿನ ಕಮಲ ಸೂಸಿದಂತೆ ನಗೆಯ ಕಂಪು
ಬಿಡಿಗಾಸಿಗೆ ದಿನಗಟ್ಟಲೆ ಸತತ ನಿರಾಯಾಸ ಯತ್ನ
ಒಬ್ಬೊಬ್ಬರ ಕಲೆಯಲ್ಲೂ ತಮ್ಮದೇ ಛಾಪು

ಇಳಿ ಗಗನದ ಅರಿವಿಲ್ಲ, ಉರಿ ಬಿಸಿಲಿನ ಪರಿವಿಲ್ಲ
ಹಸಿವಿಗಾಗಿ ನುಂಗಲಾಯ್ತು ನಾಲ್ಕು ತುತ್ತು ಅನ್ನ
ಅದೇ ಹಳೆ ಬಡತನ, ಮನೆಗಿಲ್ಲ ಬಳಿದ ಸುಣ್ಣ
ಹಬ್ಬ ಮನಸಿಗಾಗಿದ್ದರೆ ಮನೆಯೆಷ್ಟು ಚನ್ನ

ಬೆಳೆದು ಮುಂಬಾಗಿಲಲ್ಲಿ  ತುಳಸಿ ದಳದ ಚಿಗುರು
ದಿನಕೆರಡು ಬಾರಿ ಹೆಂಗಸರ ಸುತ್ತು ಮೂರು
ಸೊಂಪಾಗಿ ಬೆಳೆದುಕೊಂತು, ಹಾಲು ತೀರ್ಥ ಹೀರಿ
ತೋರಲಿಲ್ಲ ಲಕುಮಿ ಅಲ್ಲಿ ಚಿಲ್ಲರೆಯನು ಮೀರಿ

ಇದು ಕಾರ್ಮಿಕನ ಒಂದು ಅಸಹಾಯಕ ನೊಂದ ಮುಖ
ಆಗಾಗ ಮಂದಹಾಸ ಮೂಡುವುದು ನೆಪಮಾತ್ರಕ
ತೊಳೆದ ಕೈ ಮಸಿಯಾಯ್ತು ದಿನ ಬೆಳಗಾಗುವ ವೇಳೆ
ರಾತ್ರಿಗಳು ಕಳೆದವು ಬರಿ ಸಾಲದ ಬಡ್ತಿಯಲ್ಲೇ

ಸೆರೆಯಿರದ ಬಿಡುಗಡೆಗೆ ಪ್ರತಿನಿತ್ಯದ ಹೋರಾಟ
ಸಿಕ್ಕ ಎಳ್ಳಷ್ಟು ಫಲಕೆ ಆಕಾಶಕೆ ಹಾರಾಟ
ಆದ ನೋವಿಗೆ ಮತ್ತೊಂದು ನೋವು ನೀಡಿ ಸಾಂತ್ವಾನ
ಕಣ್ಣು ಮುಚ್ಚಿಕೊಂಡರೂ ಮುಗಿಯದಲ್ಲಿ ಜೀವನ......

                                                         --ರತ್ನಸುತ



Thursday 16 August 2012

ನಾನ್ರೀ ರತ್ನಸುತ

ರತ್ನಾನ್ಕೊಯ್ದು  ಮೂಡಿದ್ ಪದಗೊಳ್ ಸುಗ್ಗಿ, ಆದ್ರೂ ಇನ್ನು ಗಟ್ಟಿ ರತ್ನಾಳ್ ಬುತ್ತಿ
ನನ್ದೇನಿದ್ರು ಬರಿಯೋದೊಂದೇ ಕರ್ಮ, ಹುಟ್ಸ್ದೊಲ್ಮೆರ್ಸೋದ್ ರತ್ನಸುತನ್ ದರ್ಮ.....

Tuesday 14 August 2012

ಪ್ರತಾಪನ ಹುಟ್ಟು ಹಬ್ಬಕೆ

ಬರೆಯಲಾರದೆ ಅಲ್ಲವೋ ಬರೆಯದಿದ್ದುದು
ಬರೆಯಬೇಕೆನಿಸಿದ್ದವೆಲ್ಲವೂ ಬರೆಯಲಾಗದು
ನಿನಗೆ ಈ ದಿನ ವಿಶೇಷವಾದುದು, ಮರೆಯಬಾರದು
ಜೋಪಾನವಾಗಿ ಪದಗಳ ಜೋಡಿಸಿ ಹೀಗೆ ಬರೆದದ್ದು

ಇಷ್ಟ ಪಡದವ ಇಚ್ಛಿಸಿರುವೆ, ಏನು ಆಶ್ಚರ್ಯ!!!
ಎಷ್ಟೇ ಆದರು ನಿನಗೆ ಬರೆದದು ನಿನ್ನದೇ ಕಾವ್ಯ
ನಿನ್ನ ಕುರಿತು ಬರೆಯಲಾಯಿತು ಅದುವೇ ನನ್ನ ಪುಣ್ಯ
ನಿನ್ನದೆಂಬುವ ಕಾರಣವಿದೆ ಅದುವೇ ನನ್ನ ಧೈರ್ಯ

ಕಾವ್ಯ ರೂಪಕ ಆಶೆಯಕೆ ನೀ ಹಂಬಲಿಸಿರುವೆ
ನನ್ನ ಬೆರಳಿಗೆ ಮತ್ತೆ ಬರೆಯುವ ಕೆಲಸ ಕೊಟ್ಟಿರುವೆ
ನಿನ್ನ ಖುಷಿಯಲಿ ಬಾಗಿಯಾಗಿದೆ ನನ್ನ ಈ ಕವನ
ಹರ್ಶೋದ್ಘಾರಕೆ ಕಾರಣವಾಯಿತು ನಿನ್ನ ಜನ್ಮ ದಿನ

ಇಷ್ಟು ಬರೆದೆ, ಇಷ್ಟಕೆ ಮುಗಿಯಿತೆಂದಲ್ಲ "ಮಗ"
ಬಯಸುತಿರು ನೀ ನನ್ನ ಬರಹ ತೀರ ಆಗಾಗ
ಮೊದಲ ವರ್ಷದ ಹುಟ್ಟುಹಬ್ಬಕೆ ನನಗೆ ಸಂತೋಷ (ನಿನ್ನ ಶುಭಾಶಯಕೆ ನನ್ನ ಕವನದ ಮೊದಲ ವರ್ಷ)
ನಿನ್ನ ಖುಷಿಗೆ ಎಂದೂ ಮುಂದು ನನ್ನ ಸಹವಾಸ........

                                                              --ರತ್ನಸುತ


Saturday 4 August 2012

ರಕ್ಷಾ ಬಂಧನ


ಅಮ್ಮಳಲ್ಲದೆ  ಅಮ್ಮನ ಕರೆಗೆ
ಹೂಗೊಡುವ ಸಹೋದರಿಯೇ 
ಜಗಳದಲ್ಲಿಯೂ ತಂಪನೀವ
ಹಬ್ಬಿರುವ ತೆಂಗಿನ ಗರಿಯೇ
ಮುನಿಸಿಕೊಂಡ ಆ ಮೊಗವನು ಹೊತ್ತೂ
ಮನಸೆಳೆವ ಮನೋಹರಿಯೇ
ಹೊತ್ತ ಸಹನೆಗೆ ಸಾಟಿಯಾಗದ
ಸಾಲುಗಟ್ಟಿದ ಮಹಾ ಗಿರಿಯೇ

ಅಂಧಕಾರದ ಒಂಟಿ ಬಾಳಿಗೆ
ದಾರಿಯಾಗಿದೆ ಹೊಂಗಿರಣ 
ಆಕೆಯೊಡನೆ ಕಳೆದಂತ ದಿನಗಳೇ
ಮಾಡಿತೆಲ್ಲವ ಸಂಪೂರ್ಣ 
ಅವಳ ಕಾವಲಿಗೆ ಬೆನ್ನ ನೀಡುತ 
ಆದೆ ಕನಸುಗಳ ನಿಲ್ದಾಣ 
ಇಟ್ಟ ಬೇಡಿಕೆಯ ಪೂರ್ಣಗೊಳಿಸಲು
ಅಂತರಂಗಗಳ ಸಂಧಾನ

ಹೆಜ್ಜೆ ಗುರುತಿಗೆ ಲೆಕ್ಕವಿಲ್ಲದೆ
ಸೋತ ಅಂಕಿಯ ಎಣಿಕೆಯೂ
ಒಂಟಿಗಾಲಿನ ಜಿಗಿತ ಕೂಡ
ಬಾಲ್ಯದಾಟದ ಪ್ರಯಾಸವೂ
ಎಲ್ಲಿ ಹೆದರಿಕೆ ದಳದ ಜ್ಯೋತಿಗೆ
ದೀಪವಲ್ಲಿ ಸುರಕ್ಷಿತ
ಅವಳ ಸ್ಫೂರ್ತಿ ಜೋತೆಯಿದ್ದರಲ್ಲೇ
ಗೆಲುವುಗಳು ಅವು ನಿಶ್ಚಿತ

ಸಡಿಲಗೊಳ್ಳದ ಬಂಧವಿದು
ಗಟ್ಟಿಯಾಯಿತು ಈ ದಿನ
ಉಡುಗೊರೆಗೆ ಕಾದಿದ್ದ ಕಣ್ಗಳ
ದೂರದಲ್ಲೇ ಗಮನಿಸಿದೆ ನಾ 
ಹಣೆಗೆ ಮುತ್ತಿಟ್ಟು, ಕಣ್ಣು ತೊಟ್ಟಿಟ್ಟು
ಸವರಿದ ಕೈ ಪಾವನ
ರಕ್ಷೆಗಾಗಿ ಅಪೇಕ್ಷಿಸಿ ಬಿಗಿದಳು
ಪ್ರೇಮ "ರಕ್ಷಾ ಬಂಧನ"

                          --ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...