Monday, 8 April 2013

ವಾಸ್ತವ


ಆಳೋ ಪ್ರಭುಗಳೇ ಒಳಗಾಗಿರುವರು ಶಂಕೆಗೆ
ಸನ್ಮಾರ್ಗ ತೋರುವವರೇ ಹಾರಿದರು ಬೆಂಕಿಗೆ
ದೇಶವೇ ತತ್ತರಿಸಿದೆ ಭ್ರಷ್ಟಾಚಾರ ಸೋಂಕಿಗೆ
ಪ್ರತಿಪಕ್ಷಗಳು ಆಂಟಿವೆ ಆರೋಪದ ಕೊಂಕಿಗೆ
ರೈತನೋ ನಿದ್ದೆಗೆಟ್ಟ ಬೇಸಿಗೆ ಬಿಸಿ ಕ್ರಾಂತಿಗೆ
ಆಶ್ರಮಗಳು ದುಬಾರಿ ಬೆಲೆ ನಿಯೋಜಿಸಿದವು ಶಾಂತಿಗೆ
ಗಡಿಯಲ್ಲಿ ಗಡಿಬಿಡಿ ದೇಶ-ಭಾಷೆ ಉಳಿವಿಗೆ
ಗುಡಿಯಲ್ಲಿ ಗೊಡ್ಡು ಪೂಜೆ, ತುಂಬು ಹೊಟ್ಟೆ ಹುಂಡಿಗೆ
ಮನುಜ ಮನ ಹೊಲಸಾಗಿದೆ ಕಾಮನೆಯ ಧೂಳಿಗೆ
ಹೊಸ ರೋಗಗಳ ಸೇರ್ಪಡೆ ಇದ್ದವುಗಳ ಸಾಲಿಗೆ
ನಿತ್ಯ ಪೂಜೆ, ಹೋಮ, ಹವನ ಪಾಪದ ವಿನಾಯ್ತಿಗೆ
ದೇವರೂ ಕಿವುಡನಾದ ಪ್ರಾಮಾಣಿಕ ವಿನಂತಿಗೆ.......

                                            -- ರತ್ನಸುತ

3 comments:

  1. ಅದ್ಭುತ!!

    ನಮ್ಮ ಇಂದಿನ ಪಾಪ-ಜಗತ್ತಿಗೆ ಹಿಡಿದ ಕನ್ನಡಿಯಂತಿದೆ ನಿಮ್ಮ ಕವಿತೆ. ಪದಗಳ ಬಳಕೆ ಮತ್ತು ವಿಷಯದ ವ್ಯಾಖ್ಯಾನ ಅತ್ಯಂತ ಪ್ರಭಾವಶಾಲಿಯಾಗಿದೆ ಸರ್..

    ReplyDelete
  2. ಲೋಕದ ಡೊಂಕುಗಳ ನೇರಾ ನೇರಾ ಅನಾವರಣ. ಪ್ರತಿ ಸಾಲೂ ಚಿಂತನಾರ್ಹ.
    http://badari-poems.blogspot.in

    ReplyDelete
  3. ಧನ್ಯವಾದಗಳು ಪ್ರಶಾಂತ್ ಹಾಗು ಬದರಿ ಸರ್..... ನನ್ನ ಹುರುಪು ಹಾಗು ಜವಾಬ್ಧಾರಿ ಮತ್ತಷ್ಟು ಹೆಚ್ಚಿಸಿದ್ದೀರಿ :)

    ReplyDelete

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...