Tuesday, 10 May 2016

ಮನಭಾರ

ನಿರ್ಭಾವುಕನಾಗಿ ಉಳಿದುಬಿಡುತ್ತೇನೆ
ನನ್ನವರ ನೋವ ಕಂಡು
ಕಾರಣ ಕೇಳುವವರೆದುರು ಚೀರಬಯಸುವ ದನಿ
ಗಂಟಲಿಗಂಟಿಕೊಂಡಂತೆ... ಮೌನ!!


ಕೆಲವು ಸಂಗತಿಗಳ ಮೌನವೇ ನಿಭಾಯಿಸಬೇಕು
ದೇವರು ಮೌನವನ್ನಾದರೂ ಸೃಷ್ಟಿಸಿರುವುದೇತಕ್ಕೆ,
ಸಮಯಕ್ಕೆ ಅನುಕೂಲವಾಗಲೆಂದೋ? ಅಥವ...


ಎಲ್ಲಿ ದಾರಿ ಬಿಡಿ
ಎಲ್ಲವನ್ನೂ ಒಮ್ಮೆಲೆ ಕಕ್ಕಿಬಿಡುತ್ತೇನೆ
ಕಸಿ-ವಿಸಿಗೊಂಡ ನಿಮ್ಮಲ್ಲಿ ಕ್ಷಮೆ ಕೋರಿ
ವ್ಯಾಕ್.. ವ್ಯಾಕ್...


ಎಂಥ ಸ್ವಾರ್ಥವಲ್ಲವೇ ನನ್ನದು
ನನಗನಿಸಿದ್ದನ್ನ ಕವಿತೆಯಾಗಿಸಿಕೊಂಡು
ಅನಿಸಿಕೆಗಳ ಜೀವಂತವಾಗಿಸಿಕೊಳ್ಳುತ್ತೇನೆ.
ಕವಿತೆ ಕಟ್ಟಿದ ಕೈಗಳು ನಡುಗಿ ಸತ್ತು
ಈಗ ವಿರಮಿಸುತ್ತಿವೆಯಾದರೂ
ಕೋಟಿ ಕಂಪನಗಳ ಎಬ್ಬಿಸಿದ ಹೃದಯ
ಇನ್ನೂ ನಡುಗುವುದ ಬಿಟ್ಟಿಲ್ಲ...


ಎಲ್ಲ ಹಂಚಿಕೊಂಡು ಹಗುರಾಗಲು
ಖಾಲಿ ಉಳಿದವರಾದರೂ ಯಾರು?
ಎಲ್ಲರೂ ಭಾರಕ್ಕೆ ಬೆನ್ನುಕೊಟ್ಟವರೇ, ಅಲ್ಲವೇ?!!


                                              - ರತ್ನಸುತ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...