Tuesday, 3 January 2012

ಕವಿಯ ನೋವು

ನೋವೂ ಕವಿಗೆ ಬರೆಯಲೊಂದು ಕಾರಣ
ಚಿಂತೆ ಇಲ್ಲ ನೋಯಿಸಿ ಅವನ ಮನಸನು
ಬೇವು ಕೂಡ ಆಗುತಿತ್ತು ಸಿಹಿಯ ಹೂರಣ
ಪಾಪ, ಬಯಸದೆ  ಕೊಟ್ಟ ಕಹಿಯ ಸವಿಯನು
ಬಂದ ಹಾಗೆ ಇರುವುದಕ್ಕೆ ಉಳಿವು ಇಲ್ಲಿದೆ
ಬೇಡವೆಂದು ಜರಿದವೆಲ್ಲ ಮಾಯವಾಗಿದೆ
ಸುಖವ ಬಯಸಿ ನಿಂತ ಕಡೆಗೆ ಉಳಿದುಕೊಂಡರೆ
ಶಿಲೆಗೆ ವಿಮುಕ್ತಿಯ ಸೌಭಾಗ್ಯ ಎಲ್ಲಿದೆ......

                                       - ರತ್ನಸುತ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...