Tuesday 3 January 2012

ಕವಿಯ ನೋವು

ನೋವೂ ಕವಿಗೆ ಬರೆಯಲೊಂದು ಕಾರಣ
ಚಿಂತೆ ಇಲ್ಲ ನೋಯಿಸಿ ಅವನ ಮನಸನು
ಬೇವು ಕೂಡ ಆಗುತಿತ್ತು ಸಿಹಿಯ ಹೂರಣ
ಪಾಪ, ಬಯಸದೆ  ಕೊಟ್ಟ ಕಹಿಯ ಸವಿಯನು
ಬಂದ ಹಾಗೆ ಇರುವುದಕ್ಕೆ ಉಳಿವು ಇಲ್ಲಿದೆ
ಬೇಡವೆಂದು ಜರಿದವೆಲ್ಲ ಮಾಯವಾಗಿದೆ
ಸುಖವ ಬಯಸಿ ನಿಂತ ಕಡೆಗೆ ಉಳಿದುಕೊಂಡರೆ
ಶಿಲೆಗೆ ವಿಮುಕ್ತಿಯ ಸೌಭಾಗ್ಯ ಎಲ್ಲಿದೆ......

                                       - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...