Tuesday 16 February 2021

ಗಡಿಪಾರಾಗಿವೆ ಕನಸೆಲ್ಲವೂ

ಗಡಿಪಾರಾಗಿವೆ ಕನಸೆಲ್ಲವೂ 

ಹನಿ ಹನಿ ಜಾರಿದೆ ಮನಸ್ಸಿಲ್ಲದೆ 
ಬತ್ತಿದ ಕಣ್ಣಲಿ ಕಾಣುತ್ತೀರೋ 
ಕತ್ತಲಿಗೆ ಯಾವ ಹೆಸರಿದೆ 
ಕುರುಚಲು ದಾರಿ ನನ್ನೂರಿಗೆ 
ಮಾತೇ ಬಾರದು ನನ್ನೋರಿಗೆ 
ಈ ಮೌನದ ಭಾಷೆ ಕಲಿಯಲು 
ಮರು ಜನ್ಮವೇ ಬೇಕು ಅನಿಸುತಿದೆ 
ಉಸಿರೇ ಸಾಲದು, ಉಸಿರೇ ಸಾಲದು 
ಹಾಡಲು ಕಲಿಯಲು ಸುಖವೇನು 
ಓ.. ವಿಷವ ಹೀರಿದ ಉಸಿರ ಹಿಡಿದು 
ಪದವ ಹಾಡಲು ಬಹುದೇನು 
ಕೋಗಿಲೆಗಳಿಗೂ ಹೇಳಿಬಿಡಿ
ಅತ್ತರೆ ಲಾಭ ಯಾರಿಗಿದೆ?
ಅದೃಷ್ಟದ ಈ ಬದುಕಿನಲಿ 
ದೃಷ್ಟಿ ದೋಷದ ಶಾಪವಿದೆ 

ಸರಿಯೋ ತಪ್ಪೋ ತೀರ್ಮಾನಿಸಲು 
ಹೊರಗಿನ ಸಾಕ್ಷಿ ಏತಕೆ?
ಆತ್ಮ ಸಾಕ್ಷಿಯು ನಾಲಿಗೆ ಕಚ್ಚಿ 
ಸುಮ್ಮನೆ ಉಳಿಯಲು ನಾಚಿಕೆ 
ನೆರಳ ಹಿಡಿದು ಮುಂದಾಗುವೆ ಭ್ರಮೆಯಲ್ಲಿ 
ನಾನೇ ಅದನು ಮುಂದೂಡುವೆ ಕೊನೆಯಲ್ಲಿ 
ಈ ಸಾಗರ ದೂರದ ಜಾತ್ರೆಯ
ಕಳುವಾಗಿರೋ ಕೂಸಿನ ಕೂಗಿಗೆ 
ಕಿವಿಯಾಗುವ ಸಹನೆ ಯಾರಿಗಿದೆ 
ಎಲ್ಲವನ್ನೂ ಸಾವರಿಸಿ 
ಗಾಳಿ ಸದ್ದು ಮಾಡುತಿದೆ 
ನಿಲ್ಲು ಎಂದು ಬೇಡಿದರೂ 
ಕಾಲ ಮುಂದೆ ಸಾಗುತಿದೆ 

ಉಸಿರೇ ಸಾಲದು, ಉಸಿರೇ ಸಾಲದು 
ಹಾಡಲು ಕಲಿಯಲು ಸುಖವೇನು 
ಓ.. ವಿಷವ ಹೀರಿದ ಉಸಿರ ಹಿಡಿದು 
ಪದವ ಹಾಡಲು ಬಹುದೇನು 
ಕೋಗಿಲೆಗಳಿಗೂ ಹೇಳಿಬಿಡಿ
ಅತ್ತರೆ ಲಾಭ ಯಾರಿಗಿದೆ 
ಅದೃಷ್ಟದ ಈ ಬದುಕಿನಲಿ 
ದೃಷ್ಟಿ ದೋಷದ ಶಾಪವಿದೆ 


ಈ ಸಕ್ಕರೆ ಅಣುವಲಿ ಬೆವರಿದೆ 
ತಿನ್ನೋ ಅನ್ನದಲ್ಲಿ ಮಣ್ಣಿನ ಋಣವಿದೆ 
ಖಾಲಿ ತಣಿಗೆಯು ಮಾಡುವ ಸದ್ದಿಗೆ
ಹೊಟ್ಟೆ ಹಸಿವೊಮ್ಮೆಗೆ ಸಾಯುತಿದೆ 

ಎತ್ತರವಾದ ಶಿಖರಕೂ ಕೂಡ 
ಎಚ್ಚರ ನೀಡುವ ಮೋಡವಿದೆ 
ಉತ್ತರವಿರದ ಪ್ರಶ್ನೆಗಳನ್ನು 
ಸುರಿವ ಮಳೆಯು ಕೇಳುತಿದೆ 
ಸಿಗದ ಕೊನೆಯ ಹುಡುಕೋದೇ ಜೀವನವೇ?
ಅಲೆಯ ಎದುರು ಈಜಾಡುವ ಸಾಹಸವೇ?
ಈ ದಟ್ಟಣೆ ಏಕೋ ನೋವಿಗೆ 
ಅಣೆಕಟ್ಟನ್ನು ಕಟ್ಟಲೇ ಬೇಕಿದೆ 
ಎದೆಗೊಡುವ ಬಲವು ಯಾರಿಗಿದೆ 
ಎಲ್ಲವನ್ನೂ ಸಾವರಿಸಿ 
ಗಾಳಿ ಸದ್ದು ಮಾಡುತಿದೆ 
ನಿಲ್ಲು ಎಂದು ಬೇಡಿದರೂ 
ಕಾಲ ಮುಂದೆ ಸಾಗುತಿದೆ 

ಉಸಿರೇ ಸಾಲದು, ಉಸಿರೇ ಸಾಲದು 
ಹಾಡಲು ಕಲಿಯಲು ಸುಖವೇನು 
ಓ.. ವಿಷವ ಹೀರಿದ ಉಸಿರ ಹಿಡಿದು 
ಪದವ ಹಾಡಲು ಬಹುದೇನು 
ಕೋಗಿಲೆಗಳಿಗೂ ಹೇಳಿಬಿಡಿ
ಅತ್ತರೆ ಲಾಭ ಯಾರಿಗಿದೆ?
ಅದೃಷ್ಟದ ಈ ಬದುಕಿನಲಿ 
ದೃಷ್ಟಿ ದೋಷದ ಶಾಪವಿದೆ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...