Monday, 24 August 2015

ಸ್ಥಿತಿ-ಗತಿ

ಕಂಪಿಸುತಲೇ ಅರಳತೊಡಗಿದೆ ಮನ
ಮೈದುಂಬಿ ಬಣ್ಣ
ತನು, ಮನ ನಂದನ ವನ


ಕೆನ್ನೆ ಕೆಮ್ಮಣ್ಣ ಬಣ್ಣ
ಅಂಗೈ ಚಂಡೂವ ಬಣ್ಣ
ಕಣ್ಣು ಮುಚ್ಚಿದೊಡೆ ಕನಸುಗಳ
ಬಣ್ಣ ಬಣ್ಣಗಳ ಜಾತ್ರೆ
ಮುಂಬಾಗಿಲಿಗೆ ಪಚ್ಚೆ ಪತ್ರೆ
ಎದೆಯಾಂಮೃತದ ಹೊನ್ನ ಪಾತ್ರೆ


ನೆರಳಾಕೃತಿಗಿಂತ ಕೃತಿಯಿಲ್ಲ
ಏಕಾಂತಕೂ ಮಿಗಿಲು ಸ್ಥಿತಿಯಿಲ್ಲ
ಪದಗಳ ಪರಿಶೆಯಲಿ
ಪಾವು ಗುಟುಕಿನ ಪದ್ಯ
ಬರೆಯಲು ಬರವಿಲ್ಲ
ಬರೆಯದಿರಲು ಬಲವಿಲ್ಲ


ಮೊಗ್ಗು ಹಿಗ್ಗುವಲ್ಲೂ ಪಟಾಕಿ ಸದ್ದು,
ಸೋಜಿಗದ ಸಂಗತಿಗಳ ಸಾಲು
ಹುಚ್ಚಾಟ ಹೇಳದುಳಿವುದೇ ಮೇಲು


ಅಪೂರ್ಣತೆಯೇ ಪೂರ್ಣವಾಗಿರಲು
ಪೂರ್ಣಗೊಳಿಸುವ ಯತ್ನವೂ ಅಪೂರ್ಣ!!


                                            -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...