Thursday, 15 August 2013

ಈ ಸ್ವತಂತ್ರ ದಿನದಂದು

ಜನಸಾಮಾನ್ಯ ಬಿಕ್ಕಿದ್ದಾನೆ 
ಹೆಚ್ಚಿದ ಈರುಳ್ಳಿ ಏಟಿಗೆ 
ಅದರ ರೇಟಿಗೆ 

ಬೆಳೆದ ರೈತ ತೃಪ್ತನಾದ 

ತುಂಬಿದ ಹೊಟ್ಟೆಗೆ 
ಚಿಲ್ಲರೆ ನೋಟಿಗೆ 

ಸದನದಲಿ ನಿಲ್ಲದ ಕಲಾಪ 
ಆರ್ತಿಕ ಬಿಕ್ಕಟ್ಟಿಗೆ 
ರುಪಾಯಿ ಮೌಲ್ಯ ಕುಸಿತಕೆ 

ಇದರ ನಡುವೆ ತೊಗರಿ ದುಬಾರಿ 

ತಟ್ಟು ಒಬ್ಬಟ್ಟಿಗೆ 
ವರಮಹಾಲಕ್ಷ್ಮಿ ಹಬ್ಬಕೆ 

ಹಬ್ಬವಾಗದೆಂದು ತಿಳಿದು 
ಮುನಿದ ಮಡದಿ ತವರಿಗೆ 
ಯಾರಿಲ್ಲಾ ಪತಿಯ ನೆರವಿಗೆ 

ಹೆಮ್ಮೆಯಿಂದ ಪ್ರಜೆಗಳೆಲ್ಲಾ 

ಒಂದಾದರು ಇಂದಿಗೆ ( ಮಾತ್ರ??) 
ನಾವು ಭಾರತೀಯರೆಂಬ 
ಏಕಮತದ ಹೆಮ್ಮೆಗೆ !!!! 

                                 -- ರತ್ನಸುತ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...