Friday, 20 February 2015

ಮತ್ತೆ ಮತ್ತೆ ಬೇರ ಬಿತ್ತಿ

ಏನೂ ತಿನ್ನಲಿಚ್ಛಿಸದ ಹಸಿವು
ಏನೂ ನೋಡಲಿಚ್ಛಿಸದ ನೋಟ
ಯಾರ ನೆರಳ ಇಚ್ಛಿಸದ ಬದುಕು
ಯಾವ ಹಿತಕೂ ಒದಗದ ಉಸಿರು

ಎಂಥ ಹೆಸರ ಗುರುತಿಗೂ ದಿಗಿಲು
ಜೊತೆಗೆ ಬರದ ದಾರಿಯ ಪಯಣ
ಒಂದು ಮೌನದೊಳಗಣ ಸದ್ದು
ಮತ್ತು ಸದ್ದು ಸಾರುವ ಮೌನ

ಊರು ಸೂರಿಗಿಲ್ಲದ ಕೊರಗು
ನಾನು ಯಾರಿಗೂ ಕಾಯದವನು
ಎಷ್ಟೇ ಘಾಡವಾಗಿ ಏಕಾಂತ
ನನ್ನ ಬಿಟ್ಟು ಒಲ್ಲೆ ಯಾವುದನೂ

ಸತ್ತ ಸೂರ್ಯ ಮತ್ತೆ ಹುಟ್ಟಿದರೆ
ಇಲ್ಲ ಅತ್ತು ಸುಮ್ಮನಾದವರು
ಕಿತ್ತು ನೋಡಿಕೊಳ್ಳಲಾಗುವುದೇ
ಹೃದಯಕ್ಕಂಟಿಕೊಂಡ ಸಿಬಿರು?

ಬಿಟ್ಟು ಹೊರಟೆ ಎಲ್ಲವನೂ ಮರೆತು
ಮತ್ತೆ ಹೊಸತನೇನನ್ನೋ ಬಯಸಿ
ಹೇಳಿ ಹೋಗುವಂಥ ವ್ಯವಧಾನ
ನನ್ನಲ್ಲಿಲ್ಲ ದಯವಿಟ್ಟು ಕ್ಷಮಿಸಿ

ಕಡೆಯ ಮಾತು ಎಲ್ಲದರ ಕೊನೆಗೆ
ತುರುಗಿ ನೀಡಿ ನನ್ನ ದೋಚಿರಲು
ಯಾರೂ ದೂರ ಬೇಡಿ ನನ್ನ
ಇಂತೇ ಸಾಧ್ಯವಾಯ್ತು ನನಗಿರಲು!!

-- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...