Friday, 7 June 2013

ಪ್ರಕೃತಿಯ ಕವನ


ಇಳೆಗಿಳಿದ ತಿಳಿ ಮಂಜು 
ಹೊದ್ದು ಹುಲ್ಲಿನ ಮೇಲೆ 
ಶಮನಗೊಂಡಿತು ತಂಪು 
ಅಂತೆಯೇ ಹಸಿರೆಲೆ ಜ್ವಾಲೆ 
ಮುದ್ದಾಟದ ಫಲವೇ 
ಇಬ್ಬನಿಯ ಜನನ 
ಮುಂಜಾವ ಸ್ವಾಗತಕೆ 
ಪ್ರಕೃತಿಯ ಕವನ................ 

          --ರತ್ನಸುತ 


(ಚಿತ್ರ ಕೃಪೆ - ಹೇಮಂತ್ ಮುತ್ತರಾಜು) 

1 comment:

  1. ಓದುತ್ತಾ ಓದುತ್ತಾ ಹಾಗೇ ಆ ಪರಿಸರಕ್ಕೆ ಹೋಂದಿಕೊಂಡೆ, ಒಳ್ಳೆಯ ಕವಿತೆಯ ಲಕ್ಷಣವೇ ಇದು.

    ReplyDelete

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ ನೀ ಖಂಡಿತ ಈ ಗ್ರಹದವಳಲ್ಲ ನಕ್ಷತ್ರಗಳ ಊರು? ಬಂಗಾರದ ಸೂರು? ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ ಆಗೋ ಆ ಹಣೆಯಲ್ಲಿ ಬೆವರು ಜಿನು...