Wednesday, 26 March 2014

ಚೊಚ್ಚಲ ರಾತ್ರಿ

ಚೊಚ್ಚಲ ರಾತ್ರಿ
ಬಾರದ ನಿದ್ದೆ
ಹಾಸಿಗೆ ಚಾದರ
ಚೆದುರಿತ್ತು
ಮೀಸೆ ಚಿಗುರು
ವಯಸ್ಸದಿನಾರು
ನೂತನ ಭಾಷೆಯ
ಕಲಿತಿತ್ತು

ಶಾಂತಿಯ ನಡುವೆ
ವ್ಯವಹರಿಸುವದು
ನರಗಳ ಸಂತೆ
ಜರುಗಿತ್ತು
ನೂಕು ನುಗ್ಗಲ
ತಡೆದಿಡುವಲ್ಲಿ
ಇದ್ದ ತ್ರಾಣ
ಸಾಕಾಯ್ತು

ಇದುವರೆಗೆ 
ಅದಾವುದೂ ಅಲ್ಲದ
ಕೇವಲ ಅದುವೇ
ಅದುವಾಯ್ತು
ಎದೆ ಬಡಿತಗಳು
ಬಿರುಸಾಗಿ
ಹಿಡಿ ಮುಷ್ಟಿಯಲಿ
ಬಿಸಿ ಹೆಚ್ಚಾಯ್ತು

ಚಾಚಿದ ಮೈಯ್ಯನು
ಬಾಚುವ ಹಂಬಲ
ಹಿಂದೆಯೇ ಚೂರು
ಭಯವಿತ್ತು
ಮುಲುಗಾಟವನು
ಕೇಳಿದ ಅಣ್ಣನು // ಅಪ್ಪ
ಎಚ್ಚರಿಕೆ
ಕೊಟ್ಟಾಗಿತ್ತು 

ಆ ಮೊದಲು
ಹಸ್ತಕೆ ಆ ಪರಿಯ
ಅದ್ಭುತ ಆಟಿಕೆ
ಸಿಕ್ಕಿರಲಿಲ್ಲ
ಪಠ್ಯ ಪುಸ್ತಕ
ಆ ತನಕ
ಪ್ರಕೃತಿಗೆ ಆ
ಹೆಸರಿಟ್ಟಿಲ್ಲ

ಅಂದಾಜಿನ 
ಅರಿವಿಲ್ಲದೆ ಆಡಿದೆ
ಹೊಸ ಆಟದಿ
ಹೊಸ ಹುರುಪಿತ್ತು
ಮುಂದೆ ಆದದ್ದೆಲ್ಲವೂ
ಹೊಲಸು
ಅದುವೇ ಅಂತಿಮ
ಅರಿವಾಯ್ತು

ಎಂಥ ಪಜೀತಿ!!
ಹಾಗಾಗಿ
ಎರಡು ತಾಸು ನಿದ್ದೆ
ಬರದಾಗಿ
ತಡಮಾಡಿ ಎದ್ದೆ
ಮಾರಾನೆ ದಿವಸ
ಅರಳಿತ್ತು ತುಟಿಯು 
ತಿಳಿಯಾಗಿ !!

           -- ರತ್ನಸುತ

1 comment:

  1. ಮರು ದಿನ ಕೆ.ಎಸ್. ನರಸಿಂಹಸ್ವಾಮಿಯವರು ಬರೆದಂತೆ:
    ಮೊದಲ ದಿನ ಮೌನ
    ಅಳುವೇ ತುಟಿಗೆ ಬಂದಂತೆ

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...