ಓ
ಕೈಗೊಂಬೆಯು ನಾನಾಗುವೆ
ನೀ ಕುಣಿಸಲಾದರೆ
ಆಮಂತ್ರಣ ನಿನಗಾಗಿಯೇ
ಈ ತೋಳಿಗಾಸರೆ
ಬೇಕಂತಲೇ ನೀ ನಿಂತರೆ
ಈ ದೂರ ತಾಳೆನು
ನೀ ನುಡಿಯದೆ ಏನೊಂದನೂ
ನಾನೆಲ್ಲ ಬಲ್ಲೆನು
ತಾರಾಗಣ ಇದೋ ಸಮೀಪದಲ್ಲೇ ಮಿಂಚುವಂತಿದೆ
ಆರೋಹಣ ಈ ರಾಗವೀಗ ಏಕೋ ತುಂಬ ಕಾಡಿದೆ
ಮಳೆಗಾಲವೀಗ ಮನದೊಳಗೆ
ಮನದಾಳ ಮಾತು ತುಟಿ ಮರೆಗೆ
ಮನಸಾರೆ ಹೇಳಬೇಕು ಈಗ ಸಾವಿಗಳಿಗೆ
ಸಂಗಾತಿ, ಸಂಗಾತಿ
ನಿನ್ನಿಂದ ನಾನಾದೆ ಈ ರೀತಿ
ತಂಗಾಳಿ, ತಂಗಾಳಿ
ನೀ ಬೀಸಿ ಹೋದಂತೆ ಬಾಳಲಿ
ಯಾರಿಲ್ಲಿ, ಯಾರಿಲ್ಲಿ
ನಿನಗಿಂತ ಸರಿಸಾಟಿ ಪ್ರೀತಿಲಿ
ಈಗಾಗಲೇ ಈ ಜೀವ ನಿನ್ನದೆಂದು ಮಾತು ನೀಡಿದೆ
ಆಗಾಗ ನಾನೂ ಕೂಡ ನಿನ್ನ ಹಾಗೆ ಸೋಲ ಬೇಕದೆ
ಮಳೆಗಾಲವೀಗ ಮನದೊಳಗೆ
ಮನದಾಳ ಮಾತು ತುಟಿ ಮರೆಗೆ
ಮನಸಾರೆ ಹೇಳಬೇಕು ಈಗ ಸಾವಿಗಳಿಗೆ
No comments:
Post a Comment