Tuesday, 16 September 2014

ಜನ್ಮಾಷ್ಟಮಿ ಹನಿಗಳು

ಕೃಷ್ಣನೆಂಬಾತನು
ಮನೆ ತುಂಬ ಗುರುತ ಬಿಟ್ಟ;
ಬೈಗುಳ ತಿನ್ನುತ್ತಲೇ 
ಸಾರಿಸಿತು ಮುಸುರೆ ಬಟ್ಟೆ!!


ಶೋಕೇಸಿನಲ್ಲಿ
ಧೂಳಿಡಿದ ಕೊಳಲನ್ನು
ಊದುವ ಸಲುವಾಗಿ
ಕಿಟಕಿಯಿಂದ ಕದ್ದು
ಬೀಸಿ ಬಂತೊಂದು ಗಾಳಿ;
ಅಪ್ಪಿ ತಪ್ಪಿ
ಕರ್ಟನ್ನು ಹಾರಿತು ನೋಡಿ
ಕಿಟಕಿ ಬಾಗಿಲು ಮುಚ್ಚಿಕೊಂಡಿತು
ಕೊಳಲಿಲ್ಲ ಕೃಷ್ಣನ ಕೈಲಿ!!

ರೆಫ್ರಿಜಿರೇಟರಲ್ಲಿ ಇಟ್ಟ ಬೆಣ್ಣೆ
ಎಕ್ಸ್ಪಯರ್ ಆಗಿರುವುದನ್ನ ಗಮನಿಸದ
ತುಂಟ ಕೃಷ್ಣ
ಒಂದೇ ಬಾಯಿಗೆ ನುಂಗಿ
ಫುಡ್ ಪಾಯ್ಸನ್ ಆದ ಸುದ್ದಿ
ಫ್ಲ್ಯಾಷ್ ನ್ಯೂಸ್ ಆಯ್ತಂತೆ!!

ರಾಧೆಯರು ಓದುತ್ತಿರುವ ಶಾಲೆಗಳಲ್ಲಿ
ದುಶ್ಶಾಸನರಂಥ ಟೀಚರ್ಗಳು ಇದ್ದಾರಂತೆ;
ಎಲ್ಲಾ ಶಾಲೆಗಳಲ್ಲೂ
ಕೃಷ್ಣರಿಗೊಂದು ಸೀಟು ಮೀಸಲಿಡಬೇಕೆಂದು
ರಾಧೆಯರ ಹೆತ್ತವರ ಒತ್ತಾಯ!!

                               -- ರತ್ನಸುತ

1 comment:

  1. ನವ ಶತಮಾನದ ತಮ್ಮ ಮಾಡ್ರನ್ ಕೃಷ್ಣ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...