Thursday, 15 December 2022

ನಂದಗೋಕುಲದಲ್ಲಿ

ನಂದಗೋಕುಲದಲ್ಲಿ 

ಮಂದಹಾಸವ ಬೀರಿ
ಚಂದದಿ ನಲಿದಿರುವ ಗೋಪಾಲ
ಬೆಣ್ಣೆ ಗಡಿಗೆ ಕೆಡವಿ
ಉಂಡು ಎಲ್ಲವ ತಡವಿ
ಬಂಡರ ಬಂಡ ನೀನು ಶ್ರೀಲೋಲ
ಬಂದು ಹೋದವರೆಲ್ಲ
ಕೆನ್ನೆ ಗಿಂಡುವರಲ್ಲ
ಕದ್ದ ಕೈಯ್ಯಲಿ‌ ಸಿಕ್ಕರೆ ಅದೇ ಶಿಕ್ಷೆ
ಸಲಹು ಎಂದವರ 
ಮೊರೆಯ ಕೇಳುತಲೇ
ಎರಗಿ ನೀಡುವೆ ನೀ‌ ಶ್ರೀರಕ್ಷೆ

ಕೊಳಲ ಊದುತಲೇ
ಮಾಡುವೆ ಜೀವನ ಪಾಠವನು
ಕಡಲ ಆಳದ ಆ
ಮರ್ಮಗಳ ಬಲ್ಲವನು 
ಕಣ್ಣಲೆ ಹೆಣ್ಮನವ 
ಸೆಳೆಯುವುದೇ ನಿನ್ನ ಗುಣ
ದುಷ್ಟರ ಪಾಲಿಗೆ ನೀ
ದುಃಸ್ವಪ್ನ 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...