Tuesday, 23 July 2013

ಇದ್ದಲಾಟ























ಕಿಡಿ ಸೋಕಿ ಹಸಿದ ಇದ್ದಲ 
ಒಡಲ ಚಡಪಡಿಕೆ 
ಮೆಲ್ಲ ಸವರಿದ ತಿಳಿ ಗಾಳಿ 
ಬೆಂಬಲ ಅದಕೆ 
ಹಸಿವು ನೀಗಿದವೂ ಕೂಡ 
ಜೊತೆಯಾದವು ಅಲ್ಲಿ 
ತೇಗುತ ಸಿಡಿದು 
ಕಿಡಿ ಹನಿಗಳ ಚಿಮ್ಮಿಸಿ 

ಕೃಷ್ಣ ಸುಂದರಿ ತನ್ನ 
ಇನಿಯನೆದೆಗೆ ಒರಗಿ 
ಶೃಂಗಾರವನ್ನಾಲಿಸಿರುವಂತೆ
ಭಾಸ 
ಎದೆ ಬಿರಿದು ಕೆಂಪಾಗಿ 
ಕಪ್ಪು ಗಲ್ಲಕೆ ಮೆತ್ತಿ 
ಸುಂದರಿಯ ನಾಚಿಸಿದಂತಿತ್ತು 
ಆ ಸರಸ 

ಸಂಜೆ ನಡುಕಕೆ ಹೆದರಿ
ಅಗ್ನಿ ಚಾದರ ಹೊದಿಕೆ 
ಶಾಖ ಸ್ಪರ್ಶಕೆ ಉಬ್ಬಿ 
ತುಂಡಾದ ರವಿಕೆ 
ಬಿರುಕು ಬಿಟ್ಟಲ್ಲೆಲ್ಲಾ 
ಜ್ವಾಲೆಯ ಮುತ್ತಿಗೆ 
ಆಗ ಸುತ್ತಲೂ ಆವರಿಸಿತು
ಬಿರು ಬೇಸಿಗೆ 

ಹಬ್ಬದಬ್ಬರ ಅಲ್ಲಿ 
ಒಬ್ಬೊಬ್ಬರಾಗಿ 
ಬೆಂದು ಉಗಿದರು ಕೆಂಡ 
ಮಂಡಲದ ಒಳಗೆ 
ಬಂಢರಲ್ಲಿನ ಬಂರೂ
ಅಡಿಗೆ ಸಿಲುಕಿದರು 
ಬುಗ್ಗೆಯಾಗಲು ಕಾದು 
ಸಣ್ಣ ಕೆದಕುವಿಕೆಗೆ

ತ್ರಾಣವೆಲ್ಲವ ತೀಡಿ 
ಪ್ರಾಣವಾಗಿವೆ ಮೇಲೆ 
ಭೂದಿ ಪರದೆಯ ಅಡಿಗೆ 
ಅವಿತು ಉರಿದು 
ಜಲ ಸೋಕಲು 
ರಾಗದಲೆ ಮುಕ್ತಿ ಸಿದ್ಧಿ
ವೇಷ ಕಳಚಿ 
ಮೂಲ ರೂಪವನು ಪಡೆದು 

                   --ರತ್ನಸುತ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...