Wednesday, 2 January 2019

ಅರಿವಿನಿಂದೊಂದಿಷ್ಟು ದೂರ


ಅರಿವಿನಿಂದೊಂದಿಷ್ಟು ದೂರ
ಚೆಲ್ಲಿ ಹೋಗಿ ಸಕ್ಕರೆ
ಚೂರಾದರೂ ಉರುಳದೆ
ಜಡವಾಗಿಹೆ ಉಳಿದಲ್ಲೇ


ಅಂಜಿಕೆಯ ನೆರಳನೊಡ್ಡಿ
ಜೂಟಾಟವ ಆಡ ಬನ್ನಿ
ಮಂಜು ಗಡ್ಡೆ ಹೃದಯವೊಮ್ಮೆ
ಕರಗಿ ಹರಿದು ಹೋಗಲಿ



ನಾಲಿಗೆಯ ಬೆನ್ನಿಗೆ
ಕಚಗುಳಿ ಇಡಲು ಬಲ್ಲಿರಾ?
ಬದುಕಿ ಬಹಳ ಕಾಲವಾಯ್ತು
ನಗುವನ್ನೇ ಇರಿದು ಕೊಲ್ಲಿ!



ಕಣ್ಣೀರಿಗೆ ರೆಕ್ಕೆ ಸಿಕ್ಕು
ಹೇಳಿಯೇ ಹಾರಿ ಹೊರಟು
ಕಣ್ಣು ನೋಡು ನೋಡುತಿರಲು
ಹಾಗೇ ಮಬ್ಬು ಮುಸುಕಿತು?



ದೀಪ ಹಚ್ಚದಿರಿ ಇಂದು
ನಾಳೆಗಾಗಿ ಕಾಯುವೆ
ಕೋಪ ಶಾಂತಗೊಳ್ಳುವನಕ
ದೂರವೇ ನಿಲ್ಲುವೆ

ನಿಮ್ಮಂಥವರಿರಬೇಕು
ಇಲ್ಲದೆ
ನಮ್ಮಂಥವರಿಗೆ ನಮ್ಮರಿವಾಗದು...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...