Monday 26 July 2021

ನನ್ನ ಪಾಲಿನ ದೈವ ಇನ್ನು ಇಲ್ಲವಾದೆಯಾ

ನನ್ನ ಪಾಲಿನ ದೈವ ಇನ್ನು ಇಲ್ಲವಾದೆಯಾ 

ಕಣ್ಣ ತುಂಬ ಕಂಬನಿಯನು ಬಿಟ್ಟು ಹೋದೆಯಾ 
ಭಾರವಾದ ಮನಸ ಕೊಟ್ಟು
ತಿರುಗಿ ಬಾರದ ಲೋಕಕೆ
ಹೊರಟು ಹೋದೆ ಎಂಬ ನಿಜವು
ನೋವು ಕೊಡುವುದು ಜೀವಕೆ 
ಒಮ್ಮೆ ನಿನ್ನ ಮಾತನಾಡಿಸಬೇಕು ಅನಿಸುತಿದೆ
ಪಾದ ಮುಟ್ಟಿ, ಕೆನ್ನೆ ಸವರಿ ಮುದ್ದು ಮಾಡಬೇಕು ಅನಿಸುತಿದೆ...

ಒರಟು ಪಾದದ ಬಿರುಕಲಿ 
ಬಾಳ ಅನುಭವ ಸಾರವು 
ಅಭಯ ಹಸ್ತವ ನೀಡಿದೆ 
ಅರಿತ ಹಾಗೆ ಎಲ್ಲವೂ 
ಇರುಳ ದಾಟಿಸೋ ದೀಪವು 
ನಡುವೆ ಏತಕೋ ಆರಿದೆ 
ನೀನು ತೋರಲು ದಾರಿಯು 
ಹೊರತು ಸೋಲುವ ಭಯವಿದೆ 
ಹಬ್ಬವಲ್ಲದ ದಿನಗಳು ನೀನಿರಲು ಹಬ್ಬದ ಹಾಗೆಯೇ 
ನೀನೇ ಇರದೇ ಹೋದರೆ ಈ ತಿರುಗೋ ಭೂಮಿಯೂ ಸ್ತಬ್ಧವೇ... 

ನೆರಳ ನೀಡುವ ವೃಕ್ಷವೇ 
ಉರುಳಿ ಹೋದೆ ಏತಕೆ 
ಕಟ್ಟಿದ ಉಯ್ಯಾಲೆಯು 
ಕೂಡುತಿಲ್ಲ ಆಟಕೆ 
ಅರಳಬಲ್ಲವೇ ಹೂಗಳು 
ನಿನ್ನ ಸ್ಪರ್ಶವು ಇಲ್ಲದೆ 
ನಾನೇ ಬಿಡಿಸಿ ಬರುವೆನು
ಸುರಿಯೇ ನಿನ್ನ ಪಾದಕೆ
ಮನವಿಯೊಂದಿದೆ ದೇವರೇ ಆಗು ಇವರಿಗೆ ಆಸರೆ
ಏಕೆ ಎನ್ನುವುದಾದರೇ ಇವರೂ ಕೂಡ ದೇವರೇ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...