Monday 26 July 2021

ತಮಾಷೆ ಮಾಡಿದಂತೆ ಅಲ್ಲ ಜೀವನ

ತಮಾಷೆ ಮಾಡಿದಂತೆ ಅಲ್ಲ ಜೀವನ 

ವಿಶೇಷವಾಗಿಸೋಕೆ ಬೇಕು ಕಾರಣ 
ಹತಾಶೆ ಬೇಡ ಸೋತೆಯಾದರೀ ದಿನ 
ನಾಳೆ ಅನ್ನೋದೇ ಕೌತುಕ 

ಹೆಗಲ ಮೇಲೆ ಭಾರ ಹೊತ್ತೆ ಏತಕೆ?
ಹಗುರವಾಗು ಸೇರಿ ನಗುವ ಕೂಟಕೆ 
ಗಲಾಟೆ ಮಾಡಿಕೊಳ್ಳಲೇಕೆ ಆಗಲೇ?
ಕರಾಟೆ ಆಡಿ ಸೋಲಬೇಡ ನಿನ್ನಲೇ 
ಬರೋದು ಬಂದೇ ಬರುವುದೆಂದು ಅರಿತರೆ 
ಒಂದೊಂದೂ ಕ್ಷಣವೂ ರೋಚಕ 

ಬಿದ್ದ ಜಾಗದಲ್ಲೇ ಬೆಳೆದು ನಿಲ್ಲುವ
ಬೀಜವಾಗಬೇಕು ನೀನು ಮಾನವ
ಸವಾರಿಯಲ್ಲಿ ಏರು ತಗ್ಗು‌ ದಾಟುತ
ಪರಾರಿಯಾಗೋ ಗಾಳಿಯಂತೆ ಸಾಗುವ
ಪಿತೂರಿ ಮಾಡಿ ಕೂತರಲ್ಲೇ ಕೊಳೆಯುವೆ
ಮಾತಾಡಬೇಕು ಕಾಯಕ

ಎಷ್ಟೇ ಇರಲಿ ನಮ್ಮ ನಡುವೆ ಅಂತರ
ಪ್ರೀತಿ ಕೊಂಡಿಯಾದರೆಷ್ಟು ಸುಂದರ!
ಕೊಡೋದ ಕೊಟ್ಟು ಉಳಿಯ ಬೇಕು ತೆಪ್ಪಗೆ
ದುರಾಸೆ ಬಿಟ್ಟು ಮಣಿಯ ಬೇಕು ತಪ್ಪಿಗೆ
ಇದಿಷ್ಟೇ ‌ನನ್ನ ಅರಿವಿಗಿರುವ ಉತ್ತರ
ಮಾಡೋಣ ಬಾಳು ಸಾರ್ಥಕ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...