Wednesday, 19 February 2014

ಕೆಂಪು ದೀಪದ ಕೆಳಗೆ

ಕೆಂಪು ಉರಿದ ದೀಪ
ಸುರತ ಸಮಯದ ತಾಪ 
ಹಿಡಿದ ಕೈಯ್ಯಲಿ ಅವರು 
ಹರಿಸಿ ಹಣೆಯಲಿ ಬೆವರು 
ಮಾತು ಅಳಿಯದ ಹೊರತು 
ಸೋತ ಸುಣ್ಣದ ಸರಸ 
ಆಗ ವಿಧಿ ಇಲ್ಲದೆ 
ಸ್ವಾವಲಂಬಿತ ವಿರಸ 
 
ನೆರಳು ನೆಚ್ಚಿನ ಮಿತ್ರ 
ದೂರ ಉಳಿದ ಒಡಲ 
ಕೂಡಬಲ್ಲದು ತಾನು 
ಕಪ್ಪು ಸುಂದರ ಚಿತ್ರ 
ಬಚ್ಚಿಟ್ಟ ಗುಟ್ಟುಗಳ 
ಎದೆಯ ಇಟ್ಟಿಗೆ ಗೂಡ
ಮೆಟ್ಟಿ ಮುರಿಯುವ ಸದ್ದು 
ರಟ್ಟುಗೊಳ್ಳುತಲಿರಲು 
 
ಗಂಟಲೊಣಗುವ ಮುನ್ನ 
ಒಂದು ಅಮೃತ ಪೇಯ 
ಮತ್ತೆ, ಮತ್ತೆ ಆರಿ 
ಮತ್ತೆ, ಮತ್ತೆ ಬೇಡಿ 
ದಕ್ಕಿದ್ದ ಸ್ವೀಕರಿಸಿ
ದಕ್ಕದ್ದ ಧಿಕ್ಕರಿಸಿ 
ದಿಕ್ಕುಗಾಣದ ಸ್ವರ್ಗಕೆ 
ಮೂರೇ ಗೇಣು 
 
ಕಾಲಿಟ್ಟ ನೆಲ ಹೆಂಚು 
ಹೂಮಂಚದ ಸಂಚು 
ಹೀಗೊಂದು ವ್ಯೂಹದಲಿ 
ಇಜ್ಜೋಡು ಮನಸುಗಳ 
ಬೇರೆಸುವ ತಂತ್ರದಲಿ 
ಸಮರಕ್ಕೆ ಸಜ್ಜಾದ
ಆತ್ಮಗಳ ನಡುವೆ 
ಸಂಭೋಗ ಯಾಗ 
 
ನಿಪುಣತೆಯ ದಾಟಿ 
ಪ್ರಫುಲ್ಲತೆಯ ಮೀಟಿ 
ಬತ್ತಳಿಕೆಯ ಬಾಣ 
ಇಟ್ಟ ಗುರಿ ಮುಟ್ಟಿ 
ಪಟ್ಟ ಪಾಡಿಗೆ ಸಂದ 
ತೃಪ ಗೆಲುವು 
ಪಾರದರ್ಶಕವೀಗ 
ಈರ್ವರೊಲವು... 

        -- ರತ್ನಸುತ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...