Saturday 14 July 2012

ನೀನಿರಲು ಜೊತೆಯಲ್ಲಿ




ನಿನ್ನ ಸುತ್ತಿ ಬಂದ ನನಗೆ, ಲೋಕವೊಂದ ಸುತ್ತಿದಂತೆ
ಅಧ್ಭುತಗಳ ಎಕೀಕರಣವೇ ನಿನ್ನ ಸೃಷ್ಟಿ
ನಿನ್ನ ಮಾತ ಕೆಳಿದೆನಗೆ, ಭಾವ ಪ್ರವಚನೆ ಆದಂತೆ
ರಾಗ ರಸಗಂಗೆಯಲ್ಲಿ ಮೌನಕೆ ವಿಮುಕ್ತಿ

ನಿನ್ನ ಸಾವಿರದ ಸಾವಿರ ಹೆಜ್ಜೆ ಗುರುತುಗಳಿಗೆ
ನನ್ನ ಹಿಂಬಾಲಿಕೆಯಲ್ಲೊಂದು ಮಂದ ಬೆಳಕು
ನಿನ್ನ ಕಣ್ಣೋಟ ದಾಟಿ ಮೀರಿ ನಡೆದ ಹುಡುಕಾಟಕೆ
ಸಿಕ್ಕ ಪ್ರತಿಕ್ರಿಯೆಯ ಅಂಚಿನಲ್ಲೊಂದು ತೊಳಕು

ನಿನ್ನ ಮುನಿಸಿನಲ್ಲಿ ಬೆಂದ ನನ್ನಂತರಂಗ ವೃಂದಕೆ
ನೀನತ್ತಾರೆ ಕಂಬನಿಗೆ ಕೈ ಚಾಚುವ ತವಕ
ನೀ ಹಿಡಿದ ಕಿರು ಬೆರಳು ದಾರಿ ತೋರೋ ಗುರುವಾಗಿದೆ
ನೀನೇ ಮುನ್ನಡೆಸು ನನ್ನ ಗುರಿ ಸೇರುವ ತನಕ

ನೀ ತಾರದಿರುವ ಆ ಅಧ್ವಿತೀಯ ಉಡುಗೊರೆಯ 
ನೆನೆದೇ ಮಘ್ನನಾಗಬೇಕಿರುವ ಹಂಬಲ
ಎಡವಿಕೊಂಡ ಕಾಲ್ಬೆರಳಿಗೆ ಸಿಕ್ಕ ಗಾಯ ಗುರುತೆಷ್ಟೋ
ನಿನ್ನತ್ತ ಎಡವಿದಾಗ ಸಿಗದ ನೋವೆ ಚೊಚ್ಚಲ

ನೀ ನಡೆದೇ ಮೆಲ್ಲ ನನ್ನ ಮನಸಿನ ಮಧುಮಂಚಕೆ
ಸಿಂಗಾರ ಮಾಡಿಕೊಂಡು, ಶೃಂಗಾರವ ಅಪೇಕ್ಷಿಸಿ
ನೀ ಬಂದ ಮೇಲೆ ಎಲ್ಲ ಸಾಧಾರಣವೆನಿಸಿತು
ಎಲ್ಲಿ ಹೋಲಬಹುದು ಕಲ್ಪನೆಯ ಮೀರಿ ಮೆಚ್ಚಿಸಿ

ನೀ ಗುರುತಾದೆ ನನಗೆ, ನೀ ತೋರದೆ ಅಡಗಿಸಿಟ್ಟ-
- ಭಾವಗಳ ಬಂಡಾರಕೆ ನಾ ಆಳೊ ದೊರೆಯಾದೆ
ಸಿರಿವಂತಿಕೆ ಆಗಮಿಸಿ, ದಾರಿಧ್ರ್ಯ ನಿರ್ಗಮಿಸಿ
ನಿನ್ನಿಂದ ಬೆಳಗುವ ಜ್ಯೋತಿಗೂ ಸ್ಫೂರ್ತಿ ಸಿಕ್ಕಿದೆ.....

                                        --ರತ್ನಸುತ



No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...