Thursday 16 May 2013

ಕುಡ್ಕುರ್ ಮಾತು

ಯಂಗ್ಟಾ  : ತ್ಯಾಪೆ ಕಾಲು ಹಾಕ್ಕೊಂಡ್ ಎಲ್ಲಿಗ್ ಹೊಂಟ್ಯೋ ಮಾರ?
ಮಾರ :  ಊರಾಚೆ ಸಾರಾಯ್ ಅಂಗ್ಡಿ ಮತ್ತೆ ತೆರ್ದೈತಂತೆ ಬಾರಾ!!
ಯಂಗ್ಟಾ : ಬ್ಯಾಡ ಕಣ್ಳಾ, ಬೀದೀಗ್ ಬೀಳ್ತಾವ್ ನಮ್ಗೊಳ್  ಸಂಸಾರ
ಮಾರ : ನಾಯ್ಕ್ರೆ ಅಪ್ಪ್ಣೆಕೊಟ್ಟೊರ್ ಬಿಡ್ಲಾ ಚಿಂತೆ-ಗಿಂತೆ ದೂರ
         
            ಒಂದ್ರುಪ್ಪಾಯಂಗ್ ಮೂವತ್ ಕೆ.ಜಿ ಅಕ್ಕಿ ಕೊಡ್ತೌರಂತೆ
            ಮಾಡಿದ್ ಸಾಲ ಎಲ್ಲಾ ಮೊನ್ನೆ ಮನ್ನಾ ಮಾಡೌರಂತೆ
            ಇನ್ನೈದ್  ವರ್ಸ ನೆಮ್ದಿ ನಿದ್ದೆ, ಸಾರಾಯೇ ಕೂಳು
            ಆಮೇಲ್ ಯೋಚ್ನೆಮಾಡಿದ್ರಾಯ್ತು ಸಂಸಾರ ಹೆಂಡ್ತಿ-ಮಕ್ಳು

ಯಂಗ್ಟಾ : ಯಾರ್ಲಾ ಅವ್ನು ಪುಣ್ಯಾತ್ಮ ಇಷ್ಟಕ್ಕೆಲಾ ಕಾರ್ಣ
ಮಾರ : ಗೊತ್ತಿಲ್ವಾ? ನಮ್ ಹೊಸ ಸಿ.ಎಮ್ಮು  "ಸಿದ್ದ್ರಾಮಣ್ಣ"


                                                       --ರತ್ನಸುತ

1 comment:

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...