Wednesday 25 April 2012

ಬಾಲಾಜಿ ಮೇಲೆ ಸಿಟ್ಟು ಬಂದಾಗ

ಅವನೊಬ್ಬ ವಿಚಿತ್ರ ಪ್ರಾಣಿಯ ಹೋಲುವ ಮನುಷ್ಯ. ಅವನ ಧುಷ್ಟ ಸ್ವಭಾವ (ಧುಷ್ಟತನವಿರದಿದ್ದರೂ ಧುಷ್ಟವೆನಿಸೋ ಸ್ವಭಾವ), ಕುಚೇಷ್ಟೆ ಇವೆಲ್ಲವೂ ಒಂದು ಹಂತದ ವರೆಗೆ ಸಹನೀಯವಾದರೂ ಕೆಲವೊಮ್ಮೆ  ಕ್ಷಣಕಾದರೂ ಸಹಿಸಲಾರದಷ್ಟು ಹಿಂಸೆ ಉಂಟು ಮಾಡುವಂತದ್ದು.
ಅವನು ಬಾಲಾಜಿ, ಅವನಿಗೆ ಬಾರೀ ಸ್ವಾಭಿಮಾನ, ಅವ ಹೇಳಿದ್ದೆ ವೇದ ವಾಕ್ಯ, ತಿರುಗಿ ಬಿದ್ದರೆ ಅಷ್ಟೇ ಅವರ ಗತಿ; ನನ್ನ ಶತ್ರುಗೂ ಬೇಡ ಆ ಪಜೀತಿ. ಮಾತುಗಳು ಒಂದೊಂದು ಸಿಡಿ ಗುಂಡು, ಸಿಕ್ಕಿಹಾಕಿಕೊಂಡವ ಪಾಪ ಪಾಪಿಯೇ ಸರಿ.
ಅವನಿಗೆ ಇಬ್ಬರು ತಮ್ಮಂದಿರು, ಬಾಲಾಜಿ ಎಂಬ ತಕ್ಕಡಿಯಲ್ಲಿ ಇಬ್ಬರನ್ನು ಹಾಕಿ ತೂಗಿದರೆ ಕಿಂಚಿಷ್ಟು ಆಚೆ-ಈಚೆ ಕದಲದೆ ಮುಳ್ಳು, ಮಧ್ಯಕ್ಕೆ ಅಂಟುವುದು ಗ್ಯಾರೆಂಟೀ ಎಂಬ ವಾದ ಅವನದ್ದು.
ಭಾವುಕತೆ ಏನೆಂಬುದು ಅವನ ಜೊತೆ ಬೇರೆತವರಿಗೆ ಬಹು ಬೇಗನೆ ತಿಳಿದು ಬಿಡುತ್ತೆ, ಇಷ್ಟ ಪಟ್ಟವರಿಗೆ ಇರುವೆ ಕಚ್ಚಿದರೂ ರಾತ್ರಿಯೆಲ್ಲ ಅಳುವಂತ ಮುಗ್ಧ ಮನಸ್ಸು, ಅದೇ ಬೇಡದವರು ಗೋಳಾಡಿದರೂ ಆಲಿಸದೆ ಅವನಿಷ್ಟದತ್ತ ತಪಸ್ಸು.
ಮುಂಗೊಪತನ ಅವನಿಗೆ ಹೇಳಿಮಾಡಿಸಿದ ಆಬರಣ, ಯಾವಾಗ ನಗುವನೋ ಇನ್ನ್ಯವಾಗ ಸಪ್ಪಗಿರುವನೋ ಎಂಬ ಅಂದಾಜು ಹಾಕುವುದು ಕಷ್ಟಸಾಧ್ಯವೆ ಸರಿ. ಅನುಸರಿಸಿ ನಡೆದವರಿಗೆ ಇಷ್ಟವಾಗದಿದ್ದರೂ, ಬೇಸರಿಕೆಯಂತೂ ತರದು.
ಈ ವರೆಗೆ ಯಾರಲ್ಲೂ ನೋಡದ ಒಂದು ವಿಶಿಷ್ಟ ಗುಣ ಅವನಲ್ಲಿ ಕಂಡದ್ದು, ಅವ ಅಪರಿಚಿತರೊಡನೆ ಪಳಗಿ ಅವರ ತಮ್ಮದಿರೆಂದು ಹಚ್ಚಿಕೊಂಡ ಪರಿ. ಆ ವಿಷಯದಲ್ಲಂತೂ ಅವನು ಎತ್ತರದ ಸ್ಥಾನವನ್ನ ಸಂಪಾದಿಸುತ್ತಾನೆ ಎಲ್ಲರ ಮನಸಲ್ಲೂ. ಅದೇನು ಅಕ್ಕರೆ ಅದೇನು ಪ್ರೀತಿ, ಬಹುಷಃ ನೋಡುಗರು ಒಮ್ಮೆ ಧಂಗಾಗಬಹುದು ಅವನ ನಡುವಳಿಕೆ ಕಂಡು, ಆ ನೋಡುಗರಲ್ಲಿ ನಾನೂ ಒಬ್ಬ ಅಂದರೆ ತಪ್ಪಾಗಲಾರದು.
ಅವನದ್ದು ವಿಚಿತ್ರವಾದ ಪೀಡಿಸುವ ಗುಣ, ಕೋಪ ತರಿಸಿದರು ಕ್ಷಮಾರ್ಹ ವ್ಯಕ್ತಿತ್ವ. ಹೇಳಿಕೇಳಿ ಅಯ್ಯಂಗಾರು ನೋಡಿ, ಸೊಕ್ಕು ಸಿಕ್ಕಾಪಟ್ಟೆ, ಹೀಗಿದ್ದರು ಸಹಜ ಮತ್ತೆ.
ತಮ್ಮಂದಿರ  ಕುರಿತು ಕುಯ್ಯುವ ಮಾತುಗಳಿಗೆ ನಮ್ಮ ಕಿವಿಗಳಲ್ಲಿ ರಕ್ತ ಬರದಿದ್ದರೆ ಸಾಕು, ಅಷ್ಟರ ವರೆಗೆ ಎಲಾಸ್ಟಿಕ್ಕು ನುಡಿ, ಆದರೂ ಅಂಚಿಗೆ ಕೂತು ಯೋಚಿಸಿದಾಗ ಅವನ ಮಾತಿನಲ್ಲಿಯ ಸಾರಾಂಶ ನಿಜಾಂಶಗಳು ತಿಳಿಯುತ್ತೆ.

ಅವನು ನನ್ನ ಮೇಲೆ ರೆಗಿದಾಗ ಹೀಗೆ ಅವನನ್ನ ಗುಣಗಾನ ಮಾಡಬಹುದೇ ನೀವೇ ಹೇಳಿ? ಹೇಳಲಿಲ್ಲವೇ, ಅವನೊಬ್ಬ ವಿಚಿತ್ರ  ಪ್ರಾಣಿಯೆಂದು, ಇದಕ್ಕೆನೆ..... 


                                                                                                    -ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...