Tuesday 11 December 2012

ಹೊಸತಾಗಲಿ ಕನ್ನಡಕೆ ಹೊಸ ವರುಷ

ಹೊಸ ವರುಷದ ಹೊಸ ಕನಸಿನ ಕವನ
ಹೊಸತನ ತರುವುದೇ ಹೊಸಬರ ಮಿಲನ?
ಹೊಸ ಬರವಸೆಯಲ್ಲಿ, ಹಸಿರಾಗಿ, ಚಿಗುರಲಿ ನಮ್ಮತನ
ಹೊಸ ಆಲೋಚನೆಯ, ಆಚರಣೆ, ಆಗಿಸುವ ಸುದಿನ

ಹೊಸ ವರುಷದ ಹೊಸ ಹಸಿವಿನ ಕವನ
ಕನ್ನಡಿಗರೇ ಇರಲಿ ನುಡಿ ಗಮನ!!


ಅಭಿರುಚಿಗಳ ಬೆಳೆಸಿ
ನವರಸಗಳ ಬೆರೆಸಿ
ಸವಿಯಾದ ನುಡಿಯ ಹಿರಿಮೆ ಸಾರೋಣ
ಅನುಬಂಧವ ಬಿಗಿಸಿ
ಅಭಿಮಾನವ ತೋರಿಸಿ
ಕನ್ನಡಿಗರು ನಾವು ಒಂದೇ ಅನ್ನೋಣ

ಒಂದೇ ನಾಡಿನ, ಒಂದೇ ಹಾಡಿನ, ಪದಗಳ ಹೂರಣ
ನಾನು ನೀನು ನಾವಾಗೋಣ, ನೋವೋ ನಲಿವೋ ಜೊತೆಯಾಗೋಣ
ತನು, ಮನಗಳ ತುಂಬಿಸೋಣ

ಹೊಸ ವರುಷದ ಹೊಸ ಕದನದ ಕವನ
ಗೆಲುವಿಗೆ ಬೇಕಿದೆ ಸ್ವಾರ್ತದ ಮರಣ
ಒಲವಿನ ಬಲವನ್ನ, ಛಲವನ್ನ, ಎಲ್ಲೆಡೆ ಹಂಚೋಣ
ನಾಳೆಯ ನಮ್ಮವರ, ನಮ್ಮೆದೆಯ ಮೇಲ್ಗಡೆ ಮೆರೆಸೋಣ

ಹೊಸ ವರುಷಕೆ ಹರಿಯಲಿ ಹೊಸ ಕಿರಣ
ಆಗಲಿ ಕನ್ನಡತನದ ಹೊಸ ಜನನ...................

                                         --ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...