Saturday 13 October 2012

ಮೂರ್ಕಾಸು ಬೆಲೆಗಿಲ್ಲ ಪಗಾರ


















ನಗುತಿವೆ ನೋಡುತ ನನ್ನ,  ನಾ ತಗೆದ ನಿರ್ಧಾರಗಳು
ತೊಟ್ಟ ಚಡ್ಡಿ ಉದುರುತಿದೆ, ಎಲ್ಲೋ ಬಿಗಿದಿರಲು ಉಡ್ದಾರಗಳು
ಬಾಗಿ ಪಡೆದದ್ದು ಸಾಕು, ಇನ್ನೂ ಬಗ್ಗಿಸುವ ಸರದಿ 
ಸಮಸ್ಯೆಯನ್ನು ದೂರಾಗಿಸಲೆಲ್ಲಿ ಬೇಕು ಪರಿಹಾರಗಳು 

ಅಂಗಲಾಚಿ ಬೇಡಿದವರು ಮೊದಲಿಗೆ ನಾವೇ ನಿಜ 
ನಮ್ಮ ನೆರಳಿನಡಿಯ ಜನರು ಮಾಡುತ್ತಿರುವರು ಮಜಾ
ಬೇಡಿ ಪಡೆದುದಕ್ಕೆ ನಮ್ಮ ಕಾಡಿಯಾಗಿದೆ ಸಮ
ಇನ್ನು ಎಲ್ಲಿ ಋಣದ ಪಾಲು, ಎಲ್ಲ ಆಗಿರಲು ವಜಾ 

ಇಟ್ಟು ಬೆವರು, ಪಟ್ಟು ನೋವು, ಕೆಟ್ಟ ಕೆಲಸಗಳನು ನಾವು 
ಸರಿಪಡಿಸಲು ಇಟ್ಟೆವಲ್ಲ ಗಾಯವಾಗದೆ ನೆತ್ತರ 
ಉರಿದು ಜ್ವಾಲೆಯಾಗಿ ಮೆರೆದು, ಹಾಗೆ ಆರಿ ಹೋದ ಬೆಳಕು 
ಹೇಗೆ ಅಲ್ಲಿ ನೊಂದಿರ ಬೇಕು ಕರಗಿ ಹೋದ ಕರ್ಪೂರ

ಮಾತುಗಳಿಗೆ ಬರುವ ಅಳಲು, ಸಮರ್ತನೆಗೆ ದಾರಿ ಮಾಡದೆ 
ನಡೆಯಬೇಕು ಮಾನ್ಯತೆಗಳ ದಾರಿಗೆ ತಡವಾಗದೆ 
ಯೋಗ್ಯತೆಗಳ ಅಳಿಯ ಹೊರಟ ಬಳ್ಳಕೆ ಎರಡು ತೂತು 
ಹೇಗೆ ಪ್ರತಿಭೆ ಅಳಿಯ ಬಹುದು ಕುರುದುತನಕೆ ಜೋತು

ಅಲೆ ತನ್ನ ಪಾಡಿಗೆ ಇರುವುದು, ಅಡಗನ್ನು ದಡ ಸೇರಿಸಿ ಬಿಡುವುದು 
ಉಂಟಲ್ಲವೇ ಕಡಲಿಗೂ ಒಂದು ಪ್ರಳಯದ ಪರಮಾವದಿ ?
ಹೇಗೆ ತಡೆಯಲಾದೀತು ಆಗ ಎದ್ದ ಅಲೆಗಳ 
ಕಿನಾರೆ ಮಸಣದ ದವಡೆ, ಮೀನುಗಾರನಿಗೆ ಬೇಗುದಿ 

ಮತ್ತೆ ಮೆಲ್ಲ ಉದಯಿಸಿದ ಅದೇ ಹಳೆ ನೇಸರ 
ಹೊಸ ಅಂಗಿ ತೊಟ್ಟು ನಗುತ ಎದುರಾದ ಸರಸರ 
ಬಿಟ್ಟು ಬಿಡೆ ಸಾಕು ರಶ್ಮಿ ಇನ್ನೆಷ್ಟು ಸಂಜಾಯಿಸುವೆ 
ನಾ ಹೊರಟೆ ಹೊಸ ದಾರೀಲಿ, ನೀನಾಗ ನೆನೆದು ಪರಿತಪಿಸುವೆ.........

                                                            --ರತ್ನಸುತ  

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...