Saturday 27 October 2012

ಪ್ರಣಯ ಹಾದಿಯಲಿ














ಸ್ಮರಣೆಯಲ್ಲೇ ಸೋಲುವ 
ವಿಚಿತ್ರ ಖಾಯಿಲೆಯ ಮನಸ್ಸು 
ಜಾಗರಣೆಯಲ್ಲೂ ಮೂಡುವ
ವಿಪರೀತ ಬಂಗಿಯ ಕನಸು 
ರೇಖೆಗಳಿಗಿಟ್ಟ ಗುಂಪು - ಗುಂಪಾದ,
ಆಕಾರ ಚಿತ್ರ
ಹಾಗೊಮ್ಮೆ- ಹೀಗೊಮ್ಮೆ ಗೀಚಿ,
ಮುಗಿಸಿದ ಪತ್ರ 

ಸೋತ ಗಾಳಿಗೂ ಸೋತ ಕಾಗದ 
ಗೆದ್ದೆನೆಂದಿತು ಹಾರುತ 
ಇಟ್ಟ ಪದಗಳ ಭಾವ ಬಾರವೂ 
ಗಾಳಿಯಲ್ಲಿ ಹಗುರಾಗುತ
ತೇಲಿ ಹೋಯಿತು ಸರಿ,
ಸರಿಯಾದ ದಿಕ್ಕಿನೆಡೆ ಸಾಗೀತೇ?
ಹೇಳಲಾಗದ ಕೋಟಿ ಮಾತಿಗೆ 
ನಿರಾಯಾಸವು ಒದಗೀತೇ?

ಹಾಗೇ ಕೆಡವಿದ ಮಣ್ಣ ರಾಶಿಯ 
ಶಿಲ್ಪಿ ಕಲೆಯೆಂದು ಕರೆದರು 
ಒರಟುತನದಲೂ ಮೃದುಲ ಮನಸಿಗೆ 
ಜಾಗವಿದೆ ಅಂತಂದರು 
ಹೀಗೆ ಅಂದವರು ಒರಟರಲ್ಲದೆ 
ಹೇಗೆ ಹೇಳಿಯಾರು ಪಾಪ?
ನನ್ನಂತವರ ಹುಚ್ಚನೂ
ಪ್ರೀತಿ ಎಂಬವರು ಅಪರೂಪ

ಹೆಣ್ಣು ಅಪ್ಸರೆ, ಗಂಡು ತಿರುಕನು 
ಹೆಚ್ಚೆಂದರೆ ಬೀರುವಳು ನೋಟದ ಬಿಕ್ಷೆ 
ಸಾಧ್ಯವಾದರೆ ಅಂತರಂಗಮಂದಿರದಲಿ 
ಪ್ರಣಯ ಪ್ರದರ್ಶಿಸುವಪೇಕ್ಷೆ
ಬಂದ ಲಾಭವೂ ಅವಳದ್ದೇ 
ಆದ ನಷ್ಟವೂ ಅವಳದ್ದೇ 
ರಂಗನಾಟಕೀಯ ಪ್ರಮುಖ ಪಾತ್ರ ಅವಳದ್ದೇ 
"ಅವಳೇ ರಂಗನಾಯಕಿಯು"

ಕಾಡಿಯಾಗಿದೆ, ಬೇಡಿಯಾಗಿದೆ 
ಕೊನೆಗೂ ಸಿಕ್ಕದ್ದು ಅರ್ಹ ಸೊನ್ನೆ 
ಒಲಿಸ ಬೇಕಿದೆ ದೇವಕನ್ಯೆಯ 
ರಾಕ್ಷಸ ರೂಪದಿ ಒಲಿಸುವೆನೇ?
ವೇಷ ಭೂಷಣ ತಕ್ಕ ಮಟ್ಟಿಗಿದೆ 
ಇನ್ನಾಗಬೇಕು ಮನಃ ಪರಿವರ್ತನೆ
ಕಲ್ಲು ಹೃದಯವ ಕರಗಿಸೋಕೆ
ದಿನ-ರಾತ್ರಿ ಕಲ್ಲಿಗೇ ಪ್ರಾರ್ತನೆ.........

                                  --ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...