Thursday 19 March 2020

ಮರೆಯದೆ ಬರುವೆಯಾ ಕರೆದರೆ ಮನಸಿಗೆ?

ಮರೆಯದೆ ಬರುವೆಯಾ ಕರೆದರೆ ಮನಸಿಗೆ?
ತಲುಪಿಸಿ ಬಿಡೆಯಾ ಕೊನೆಯ ವಿಷಯ ಎದೆಗೆ ನೀ ಒಲವೇ...
ಮರೆಯದೆ ಬರುವೆಯಾ ಕರೆದರೆ ಮನಸಿಗೆ?

ಜೀವವೇ, ಜೀವಕೆ ಕಾವಲಾಗಿರು ಹೀಗೇ ಎಂದೆಂದಿಗೂ 
ಯಾರಿಗೂ ಕೇಳದ ಮೌನವ ಆಲಿಸು 
ಬೇಡಿದೆ ಕಂಬನಿ ನಿನ್ನನೇ ಈಗಲೂ ... ಜಾರುತ, ಜಾರುತ... 

ಉಳಿಸಲು ಬರುವೆಯಾ ಮುಳುಗಲು ಒಲವಲಿ?
ಉಸಿರನು ಕೊಡುತಾ ಪಡೆವ ಸುಖವ ಕೊಡಲೇ ನಾ ನಿನಗೆ 
ಉಳಿಸಲು ಬರುವೆಯಾ ಮುಳುಗಲು ಒಲವಲಿ?

ಎಂದಿಗೂ, ಮಾಸದ ಮಂದಹಾಸವೇ ನೀನೇ ಆಗಬೇಕಿದೆ 
ದಾರಿಯು ಸಾಗಲು ಬೇಕಿದೆ ಆಸರೆ 
ನಿನ್ನಯ ತೊಳಲಿ ಬಾಳುವೆ ಎಂದಿಗೂ ...ಸೋಲುತ, ಸೋಲುತ ... 

**ಹಾಡು**
https://soundcloud.com/bharath-m-venkataswamy/wqabfyjdfhub

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...