Wednesday 12 May 2021

ಮನದಲಿ ಆರದ ಗಾಯವ ಮಾಡಿ ಹೋಗು

ಮನದಲಿ ಆರದ ಗಾಯವ ಮಾಡಿ ಹೋಗು ಈಗಲೇ 

ಮುಲಾಜೇ ಇಲ್ಲದೆ 
ನೀನೆಂದರೆ ಮೂಡುವ ನೂರು ಭಾವದ ಅಲೆ 
ಅದಾಗೇ ಸಾಗಿದೆ 
ಹಾಯಾದ ಸವಾರಿಗೆ 
ಸಾತಿ ನೀನಾದೆ ವಿನೋದ ಕಾರಣ   
ಒಂದೊಂದೇ ವಿಚಾರ ಹೇಳುವೆ 
ಮಾತಾಡದೆ ನೀ ಹಿಂಬಾಲಿಸು 

ತಂಗಾಳಿ ನೀ  ಬರಬೇಡ  .. ಓ 
ತಂಗಾಳಿ ನೀ  ಬರಬೇಡ 
ನಾನೇ ಇರುವೆ ಜೊತೆಗೆ 

ಕಣ್ಣಲ್ಲಿ ನಿಂತೆ ನೀನು 
ಅದು ಏನೇನೋ ಸೂಚನೆ ಕೊಟ್ಟು ಹೋದೆ  
ಗುಟ್ಟಾಗಿ ಗೀಚಿಕೊಂಡೆ  
ಅದ ಹೇಗೆಂದು ಓದಲಿ ನಿನ್ನ ಮುಂದೆ 
ಮರೆ ಆದಾಕ್ಷಣ ಕಣ್ಣೀರಿಗೂ 
ಜಾರುವ ಹಂಬಲ ಹೆಚ್ಚಾಗಿದೆ 
ಅರೆಗನಸಲ್ಲಿಯೂ ನಿನೊಂದಿಗೇ 
ಇರಬೇಕು ಎಂಬ ಇಚ್ಛೆಯಿದೆ.. ಒಲವೇ... 

ಸಂಗಾತಿ ಆರಂಭಿಸು 
ಈ ಮಂಜನು ಕರಗಿಸೋ ಹಾಡೊಂದನು 
ಬಾಯಾರಿ ನಿಂತಂತಿದೆ 
ನೀ ಸೋಕುತ ಮೋಹಿಸು ಈ ಹೂವನು 
ಹೊಸ ಅಧ್ಯಾಯವು ಶುರುವಾಗಿದೆ  
ಸಾಗಿದೆ ಪ್ರೇಮದ ಕಾದಂಬರಿ 
ಕಿಸೆ ತುಂಬುತ್ತಿದೆ ಉಲ್ಲಾಸವು 
ಪ್ರೀತಿಯ ಅಂಕವು ಹೆಚ್ಚುವರಿ.. ಒಲವೇ.. 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...