Friday 17 September 2021

ಊರ ಬಿಟ್ಟು ಬಂದವರು

ಊರ ಬಿಟ್ಟು ಬಂದವರು

ಸೂರನ್ನೇ ಕಾಣದವರು
ಎದುರು ಸಿಕ್ಕರು
ಒಂದು ಮಳೆಗಾಲದ ರಾತ್ರಿ
ಕನಸು ಬತ್ತಿದ ಕಣ್ಣು
ಉಸಿರಲಿ ಆರದ ಹುಣ್ಣು
ಮುಗುಳು ನಕ್ಕರು
ಅದು ನೋವೆಂಬುದು ಖಾತ್ರಿ  

ಒಬ್ಬರ ಮನೆಯಲ್ಲಿ 
ಹಬ್ಬದ ಊಟ ಸವಿ 
ಮತ್ತೊಬ್ಬರಿಗಲ್ಲಿ  
ಊಟವೆಂಬುದೇ ಹಬ್ಬ
ಹಸಿವನ್ನು ಹಂಚುವಲ್ಲಿ 
ತೋರಿದ ನಿಷ್ಠೆಯ ನೀ 
ಅನ್ನ ಹಂಚುವಲ್ಲಿ 
ಯಾಕೆ ತೋರಲಿಲ್ಲ ದೇವರೇ?

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...