Thursday 15 December 2022

ಆದಾಗಿಗಿಂತ ಗಾಯ

ಆದಾಗಿಗಿಂತ ಗಾಯ 

ಕಾಡೋದು ಆರೋವಾಗ 
ಏನೊಂದೂ ತೋಚದು ಈಗ 
ಈ ದಾರಿ ನಿಂತಿರುವಾಗ 
ನೀ ದೂರವಾದೆ ಏಕೆ 
ಕಣ್ಣೀರು ಜಾರೋವಾಗ... 

ಬೇಕೆನ್ನುವಾಗ ಬರದೆ
ಸಾಕೆನ್ನುವಾಗ ಬರುವೆ
ಕನಸೆಂಬ ಕನ್ನಡಿಯಲ್ಲಿ
ನೀ ಮಾತ್ರ ಏತಕೋ ನಗುವೆ
ಮಳೆಗಾಲವಾದರೂ ಇನ್ನೂ
ಬಿರುಕಲ್ಲೇ‌ ನನ್ನಯ ಜಾಗ
ನೀ ಆಗಬೇಕಿದೆ ಇನ್ನೂ
ಈ ನನ್ನ ಜೀವದ ಭಾಗ
ನೀ ದೂರವಾದೆ ಏಕೆ
ಕಣ್ಣೀರು ಜಾರೋವಾಗ... 

ಇನ್ನೆಲ್ಲಿದೆ ವಿರಾಮ
ಅಲೆದಾಡಿಸಿರುವೆ ಬಿಡದೇ
ಬಾಳೆಂಬ ಕಾದಂಬರಿಯ
ಕಳುವಾದ ಹಾಳೆಯು ನಿನದೇ
ಗಡಿಯಾರ ಮುಳ್ಳಿನ ಹಾಗೆ
ಅನುರಾಗ ಇರಿದಿರುವಾಗ
ಬಿಡಿಯಾಗಿ ಬಿಡಿಸಿದರೂನೂ
ಕಹಿ ನೆನಪೇ ಮೂಡಿರುವಾಗ 
ನೀ ದೂರವಾದೆ ಏಕೆ
ಕಣ್ಣೀರು ಜಾರೋವಾಗ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...