Friday 17 October 2014

ಭಯ !!

ಕಾಡಿಗೆ ತೀಡ ಬೇಕು;
ನಾನೇ ಮಸಿಗೊಳಿಸಿದೆ-
-ನೆಂಬ ಅಪವಾದದ ಭಯ!!
ಕಂಬನಿ ತಡವ ಬೇಕು;
ನಾನೇ ಹರಿಸಿದೆನೆಂಬ
ಅನುಮಾನದ ಭಯ!!
ನೆತ್ತರ ತಡೆಯ ಬೇಕು;
ನಾ ಹೀರುವ ಪಿಪಾಸು
ಎಂದು ಆಡಿಕೊಳ್ಳುವವರ ಭಯ!!
ನಾ ನಗ ಬೇಕು;
ನಗುವವರೆದುರು
ನಗೆಗೀಡಾಗುವೆನೆಂಬ ಭಯ!!
ನಾನೂ ಅಳ ಬೇಕು;
ಮತ್ತೆ ನಗಲಾರೆನೇನೋ?
ಎಂಬ ಗೊಂದಲದ ಭಯ!!
ನಾ ಉಸಿರಾಡಬೇಕು;
ಅದರಲ್ಲೂ ಹುಳುಕು
ಹುಡುಕುವವರ ಸಮರ್ಥನೆಗಳ ಭಯ!!
ನಾ ಬದುಕ ಬೇಕು;
ಹೀಗೇ ಬದುಕು ಎಂಬ
ಕಟ್ಟುಪಾಡಿನ ಭಯ!!
ನಾನೂ ಭಯ ಪಡಬೇಕು;
ಭಯವೇ ನನ್ನ ಪಡೆದುಬಿಟ್ಟರೆ?
ಎಂಬ ಭಯ...!!
                             -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...