Friday 17 October 2014

ಚಿಟ್ಟೆ

ವೇಘ ಕಠೋರ
ಪ್ರಾಭಲ್ಯ ಕಠೋರ
ಭಾರ ಕಠೋರ
ಆ ಚಿಟ್ಟೆ ಸುರಕ್ಷತೆ ಕಂಡಿದ್ದು ಮೃದುತ್ವದಲ್ಲಿ
ಹಗುರಾದ ಅಲೆ-ಅಲೆಯ ಹಾರಾಟದಲ್ಲಿ
ಅಲ್ಲಿ ದಟ್ಟ ಮರವ ಸೀಳಿ ಛಿದ್ರ-ಛಿದ್ರಗೊಂಡ
ಬೆಳಕು ಹಾಸಿದ ಹೆದ್ದಾರಿಯ ಅಡ್ಡ ರಸ್ತೆಯಲ್ಲಿ
ನಮ್ಮಾಳ್ವಿಕೆಯ ಸಾಮ್ರಾಜ್ಯಗಳು ತೆರೆದುಕೊಳ್ಳುತ್ತವೆ
ನಾ ಅಲ್ಲಿ ಶಕ್ತಿ ಇಮ್ಮಡಿಗೊಳಿಸಿ ನಿಲ್ಲುತ್ತೇನೆ
ಪ್ರತ್ಯುತ್ತರವಾಗಿ ಆ ಸಂಭಾವಿತ ಚಿಟ್ಟೆ
ಎಂದಿಗಿಂತಲೂ ಹೆಚ್ಚು ಮೆರುಗಲ್ಲಿ ಶರಣಾಗಿ
ನನ್ನ ಒರಟು ಕಾಪಿನ ಮೇಲೆ ಹಾರಿ ಕಾಲೂರುತ್ತದೆ
                                           -- ರತ್ನಸುತ

1 comment:

  1. ಒಮ್ಮೊಮ್ಮೆ ಅಸಲು ಗೆಲ್ಲುವುದೇ ಮೃದುತ್ವ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...