Tuesday 11 June 2013

ಹೊರ್ಡೋ ಟೈಮಲ್ ಒಂದೆರ್ಡ್ ಮಾತು



















ವಿದಾಯ ಹೇಳೋ ವೇಳೇಲಿ
ನಿನ್ನ ಹಣೆಗೆ ಮುತ್ತಿಟ್ಟಾಗ ಗೊತ್ತಾಗಿಲ್ವಾ?
ಇದು ಗೆಳೆತನಕ್ಕೂ ಮೀರಿದ್ದು ಅಂತ
ಗೊತ್ತಾದ್ಮೇಲೂ ಸುಮ್ನಿದ್ಯಾ?
ಮತ್ಯಾಕೆ ಕಣ್ಣು ತೇವ ಆಯ್ತು
ನಿನ್ಮ ನ್ಸಲ್ಲೂ ಚೂರು ಪ್ರೀತಿ ಉಳ್ಕೊಂಡಿತ್ತಾ ??

ನೀನ್ ನನ್ ಪಕ್ಕ ಕೂತಾಗೆಲ್ಲಾ
ಎಷ್ಟು ನಾಚ್ಕೊತಿದ್ದೆ ಅಂತ
ಪ್ರತಿ ಸಾರಿ ಕಚ್ಚ್ಕೊಂಡಿದ್ ನನ್ ನಾಲ್ಗೆನ ಕೇಳು
ಕನ್ನಡ ಪದ ಬರಿಯೋಕ್ ಗೊತ್ತು
ಆಗಾಗ್ ಯೆಂಡ ಬಿಟ್ಕೋತಿದ್ದೆ
ಹೆಂಡ್ತಿ ನೀನಾಗ್ಬಿಟ್ಟಿದ್ರೇ, ನಂದೇ ರತ್ನನ್ ಬಾಳು

ನೀನೊಂದ್ ಜಾತಿ, ನಾನೊಂದ್ ಜಾತಿ
ಹಿಂಗ್ಯಾಕ್ ಆಗೊಯ್ತೋ ಗೊತ್ತಿಲ್ಲ
ದೇವ್ರು ಆಟಾಡ್ತೌನೆ ಈ ಜಾತಿ ಹೆಸ್ರಿಟ್ಟು
ತುಂಬೋ ತನ್ಕ ಅಳ್ತಾಯಿರು
ಅಂತ ಆತ ಬಿಟ್ಟಂಗೌನೆ
ಹೃದ್ಯ ಚುವ್ಟಿ, ಕೈಗೆ ಬೆಳ್ಳಿ ಚೊಂಬೊಂದನ್ನ ಕೊಟ್ಟು

ಆಸೆ ಸೆರ್ಗಿನ್ ಆಚೆ ಅಂಚಲ್
ಎಷ್ಟು ಭಾರ ಹೊತ್ತು ನಡೀತೀ
ಎಲ್ಲಾ ನನ್ ಜೇಬಿಗಿಳ್ಸಿ ನೆಮ್ದಿಯಾಗಿರ್ಬಾರ್ದಾ?
ನೆರ್ಗೆ ಸರಿ ಮಾಡೋಕಂತ
ಕರ್ದೆ ಒಮ್ಮೆ ಗೆಪ್ತಿ ಮಾಡ್ಕೋ
ಆಗ್ಲಾದ್ರೂ ನನ್ನ ಗಂಡ ಅಂತ ಅನ್ಕೋಬಾರ್ದಾ?

ಹೋಗ್ಲಿ ಬಿಡು,
ಏನ್ ಮಾತಾಡಿ ಏನ್ ಪ್ರಯೋಜ್ನ
ನೀನಂತೂ ನನ್ ಬಿಟ್ ಹೋಗೋಕೆ ತಯಾರಾಗಿದ್ದೀಯ
ಸತ್ಮೇಲ್ ನನ್ ಗೋರಿ ಮುಂದ್ ನಿಂತು ಚೂರು ಅಳ್ತೀಯಲ್ಲಾ
ಆವಾಗ್ಲಾದ್ರು ಪ್ರೀತಿಸ್ತಿದ್ದೆ ಅಂತ ಒಪ್ಕೊತೀಯಾ??


                                               --ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...