Friday 7 June 2013

ಪ್ರಕೃತಿಯ ಕವನ


ಇಳೆಗಿಳಿದ ತಿಳಿ ಮಂಜು 
ಹೊದ್ದು ಹುಲ್ಲಿನ ಮೇಲೆ 
ಶಮನಗೊಂಡಿತು ತಂಪು 
ಅಂತೆಯೇ ಹಸಿರೆಲೆ ಜ್ವಾಲೆ 
ಮುದ್ದಾಟದ ಫಲವೇ 
ಇಬ್ಬನಿಯ ಜನನ 
ಮುಂಜಾವ ಸ್ವಾಗತಕೆ 
ಪ್ರಕೃತಿಯ ಕವನ................ 

          --ರತ್ನಸುತ 


(ಚಿತ್ರ ಕೃಪೆ - ಹೇಮಂತ್ ಮುತ್ತರಾಜು) 

1 comment:

  1. ಓದುತ್ತಾ ಓದುತ್ತಾ ಹಾಗೇ ಆ ಪರಿಸರಕ್ಕೆ ಹೋಂದಿಕೊಂಡೆ, ಒಳ್ಳೆಯ ಕವಿತೆಯ ಲಕ್ಷಣವೇ ಇದು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...