Monday 10 June 2013

ದ್ಯಾವ್ರೊಟ್ಟಿಗ್ ಮಾತು-ಕತೆ



















ತಮ್ ತಮ್ ಅನ್ಕೂಲಕ್ತಕ್ಕಂಗೆ 
ತಾಳ ಹಾಕೋ ಮಂದಿ ಇವ್ರು 
ತಾಳ ತಪ್ಪೋದ್ರೇನು ತಕ್ಕಾ 
ಅದು ಒಂದು ತಾಳಾನೇ 
ಅಣ್ತಮ್ಮಂದ್ರು ಅನ್ನಿಸ್ಕೊಂಡೋರ್ 
ನೆಂಟಸ್ತನ ಮುರ್ಕೊಂಡವ್ರೆ  
ಕಾಸು ಮಾಡಿ ಮನ್ಸು ಮುರ್ದೋ 
ಗುಡ್ಸ್ಲೇ ಅಲ್ವಾ ಅರ್ಮಾನೆ?

ನಗ್ತಾ ಐತೆ ತುಟಿ ಆದ್ರೆ 
ಉಸ್ರಲ್ ವಿಸ ತುಂಬ್ಕೊಂಡೈತೆ 
ಮನ್ಸಾ-ಮನ್ಸನ್  ಬೇಟೆ ಆಡ್ಕೊಂಡ್ 
ಸಾಯ್ತಾವ್ರೇ ಇಲ್ಲಿ 
ಮನೆ ಮುಂದೆ ಬೇಲಿ ಸೀಮೆ 
ಮುಳ್ಳಿನ್ ದಾರಿ, ನೆತ್ತರ್ ಕೊಡಿ 
ಹುವಾಗ್ಬೇಕಿದ್ ಹೃದಯ ಆಯ್ತು 
ಚುಚ್ಚೋ ಪಾಪಸ್ಕಳ್ಳಿ 

ಮಾತ್ಗಾರ್ರು ಸಿಕ್ತಾರೆಲ್ಲೂ 
ಮಾಡ್ತೋರ್ಸೋರಿಲ್ಲಾ ಒಬ್ಬ್ರೂ 
ಮೀಸೆ ತಿರ್ವೋನ್ ಆದ ಗಂಡ್ಸು 
ಭೂಮಿಗ್ ಭಾರ್ವಾಗಿ 
ಹುಟ್ಟಾಗದೆ ಸಾಯೊ ತನ್ಕ 
ಹೆಂಗೋ ಬದ್ಕಿದ್ರಾಯ್ತು ಅಂತ 
ಬಾಳೋ ಮಂದೀನ್ ಕರ್ಸ್ಕೋ ತಂದೆ
ನರ್ಕಕ್ ನೇರ್ವಾಗಿ!!

ನಾನು, ನಂಗೇ, ನಂದೇ ಎಲ್ಲಾ 
ಅನ್ನೋ ಪಾಪಿ ಮುಂಡೇವುಕ್ಕೆ 
ತಿಳಿಯೋದ್ ಎಂದ್ಗೋ ಸತ್ತಾಗ್ -
-ನಮ್ಕೂಡೇನೂ ಬರ್ರಾಕ್ಕಿಲ್ಲಾ
ಇಗೋ-ಅಗೋ ಅಂತ ಸುಮ್ಕೆ 
ಸತಾಯ್ಸ್ತೀಯ ಒಡ್ಯ ನೀನು 
ಹಾಳಾಗೊಗ್ರಿ ಅಂತ ಯಾಕೆ 
ಪ್ರಳಯ ಆಗ್ಸಾಕ್ಕಿಲ್ಲಾ!!

ದ್ಯಾವ್ರೆ ನಿನ್ಕೂಡ್ ಮಾತಾಡೋದ್ನ 
ಯಾರ್ಕೂಡಾರಾ ಹೀಳ್ಬಿಟ್ಟೀಯ 
ನನ್ನೇ ದ್ಯಾವ್ರು ಅಂತ ಮಾಡಿ 
ನಿನ್ ಮರ್ತಾರು ಜನ!! 
ಈವತ್ತಿಗಿಷ್ಟ್ ಸಾಕು ಮಾತು 
ಇನ್ನು ಸಿಕ್ಕಾಪಟ್ಟೆ ಐತೆ 
ನಾಳೆ ಸಿಗು ಇನ್ನಷ್ಟೊತ್ತು 
ಕುಂತು ಮಾತಾಡಣ ......... 


                              --ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...