Monday 19 October 2015

ಚಿಗುರು


ಅಲ್ಲೆಲ್ಲೋ ಒಂದು ಚಿಗುರು
ದೊಣ್ಣೆನಾಯಕನ ಅಪ್ಪಣೆ ಪಡೆಯದೆ
ಆಗಷ್ಟೇ ಕಣ್ಣು ಬಿಟ್ಟಾಗ
ಬಣ್ಣಗಳೆಲ್ಲವೂ ಬಣ್ಣ ಹಚ್ಚಿಕೊಂಡಂತೆ
ಹುಚ್ಚೆದ್ದು ಕುಣಿಯುತ್ತಿದ್ದವು

ಮರೆಯಲ್ಲೇ ಬೆಳೆದು
ಮುಗಿಲತ್ತಲೇ ಮುಖ ಮಾಡಿ
ತವರ ಗಂಟಿಗೆ ವಿರುದ್ಧವಾಗಿ
ಚಾಚಿಕೊಂಡ ತಳಿರಿನಂಚಿಗೆ

ಮುದಿತನ ಉಂಟಾಗುವುದು ಕಟ್ಟಕಡೆಗೆ

ಒಂದು ಇಬ್ಬನಿಯಾದರೂ ಎಲೆಯಮೇಲೆ

ಅವಿರತವಾಗಿ ಉಳಿದುಕೊಂಡಿದ್ದರೆ

ಕಾಲ ಕಾಲದ ದಾಸೋಹ ಕಾಲವಾಗುತ್ತಿತ್ತು

ಎಲೆಯಂಚಿನ ಮೋಜುಕೂಟದಲ್ಲಿ
ಕೆಲ ಕಾಲ ವಾಲಾಡುತ್ತ ಬೇರ್ಪಟ್ಟು
ಮಣ್ಣ ರುಚಿಸುವ ಸಣ್ಣ ಹನಿ
ಬಿಟ್ಟು ಬಂದ ರಭಸಕ್ಕೆ ಎಲೆ ಕಂಪಿಸುತ್ತಲೇ ಇತ್ತು

ಅತ್ತಕಡೆಯಿಂದ ಮುಪ್ಪು ಹಣ್ಣಾಗಿಸುತ್ತಿದ್ದಂತೆ
ಇತ್ತಕಡೆ ದೊಣ್ಣೆನಾಯಕನ ಕಣ್ತಪ್ಪಿಸಲು
ಹರಸಾಹಸ ಪಡುತ್ತಿದ್ದ ಎಲೆಯ ಆತಂಕಕ್ಕೆ
ತುಪ್ಪ ಸುರಿಯುತ್ತಿದ್ದ ತಂಬೆಲರು
ಹಿಂದೊಮ್ಮೆ ಹಿತವೆನಿಸಿದ್ದೂ ಉಂಟು!!

ಇನ್ನೆಷ್ಟು ಕಾಲ ನಾಟಕ
?
ತೆರೆ ಬಿದ್ದ ಮೇಲೆ ಬಣ್ಣ ಕಳಚಲೇಬೇಕು
,
ಉದುರಿದೆಲೆಯ ಕಣ್ಣೀರ

ಕೊಂಬೆ, ಬುಡ, ಬೇರು ಪಕ್ವವಾಗಿ ಗ್ರಹಿಸಿ
ಬೀಳ್ಗೊಡುವ ವೇಳೆ
ಮತ್ತೊಂದು ಚಿಗುರ ಹಬ್ಬ;
ದೊಣ್ಣೆನಾಯಕನ ಅಪ್ಪಣೆಯಿಲ್ಲದಂತೆ
!!

                                   --
ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...