Sunday 23 November 2014

ಕ್ವಾಪದ್ ಪದ್ಯ

ಬಚ್ಲು ಸಾರ್ಸಿದ್ ಪೊರ್ಕೆ ಹಿಡ್ದು
ಮಕ ಬೆಳ್ಗ್ತೀನ್ ದರ್ಬೇಸಿ
ಕಣ್ಣಿಗ್ಕಾಣ್ದಂಗ್ ಎಲ್ಬಿದ್ಸತ್ತೆ...

ಉಗಿ ಬೇಕು ಕ್ಯಾಕರ್ಸಿ


ಮಾನ ಮರ್ವಾದೆ ಅಂತ
ಏನ್ರಾ ಐತಾ ನಿನ್ ಜನ್ಮುಕ್ಕೆ
ನಂಗೇ ಯಾಕ್ ಗಂಟ್ಬೀಳ್ಬೇಕಿತ್ತು
ಏನ್ ಹೇಳ್ಬೇಕು ನನ್ ಕರ್ಮುಕ್ಕೆ


ಬೇಡ್ಕಂಡ್ ತಿನ್ನೋ ನಿನ್ ನಂಬ್ಕಂಡ್ರೆ
ಆಯ್ಕಂಡ್ ತಿನ್ನೋದ್ ತಪ್ಪಲ್ಲ
ಕೈಯ್ಯೋ ಕಾಲೋ ಮುರ್ಯೋಗಂಟ
ನನ್ ಮನ್ಸಿಗ್ ನೆಮ್ದಿ ಸಿಕ್ಕಲ್ಲ


ಮೈಯ್ಯೆಲ್ಲ ಕಜ್ಜಿ ಗಾಯುಗ್ಳಾಗಿ
ಕೆರ್ಕೊಳ್ಳೋಕುಗ್ರು ಬರ್ದಿರ್ಲಿ
ನಿನ್ ಕಟ್ಕೊಂಡೋಳು ಆಸ್ತಿ-ಪಾಸ್ತಿ
ಎಲ್ಲ ಹೊತ್ಕೊಂಡ್ ಓಡೋಗ್ಲಿ


ನಿನ್ ಸತ್ ಗಂಡ್ಜನ್ಮುಕ್ಕೊಂದಿಷ್ಟ್ ಬೆಂಕಿ
ಎಳ್ಳು-ನೀರು ಸುರ್ದೋಗ
ಯಾವ್ ಡಾಕ್ಟ್ರೂ ಮಾತ್ರೆ ಕೊಡ್ದಂಗೆ
ಬರ್ಬೇಕು ನಿಂಗೆ ದೊಡ್ರೋಗ


ನಿನ್ ಹಳೆ ಕಿತ್ತೋದ್ ಜೋಡ್ನಂಗೆ
ಕೊಳ್ತು ನಾರೋ ತಿಪ್ಪೆಗೆಸಿಯ
ಇದೇ ಕೊನೆ, ಮತ್ತೇನ್ರ ನೀನು
ಹುಟ್ಬಂದ್ ಕಣ್ಣಿಗ್ ಬಿದ್ದೀಯ


ನಿನ್ ಸುತ್ತೋ ಚಾಪೇಲ್ ಇರ್ವೆ ಬಿಟ್ಟು
ಸತ್ರೂ ಸಾಯೋಕ್ ಬಿಡ್ಬಾರ್ದು
ನಿನ್ ಬಾಯಿಗ್ ಸುರ್ಯೋ ಮಣ್ಣು ಕೂಡ
ಮೂಸೋ ಹಂಗೆ ಇರ್ಬಾರ್ದು


                                   -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...