Wednesday 14 December 2016

ಪರಮಾತ್ಮನಿಗೊಂದು ಪತ್ರ

ಇಲ್ಲಿ ಹಾಳಾಗೋದೆ ತಂದೆ
ಬಂದು ನಿಲ್ಲಪ್ಪ ನೀ ಕಣ್ಣ ಮುಂದೆ
ಬಯ್ಯೋರೇ ಆಗೋದ್ರು ಎಲ್ಲ
ನಾನು ಮಾಡಿರೋ ತಪ್ಪೆಲ್ಲ ಒಂದೇ..


ಇಟ್ಟಾಗ ತಕ್ಷಣ ಕೆಟ್ಟಲ್ಲಿ ಕಾಲ್ಗುಣ
ಬಿದ್ದೋಗ್ಲಿ ಅತ್ಲಾಗೆ ಕಾಲು
ಮಾತಿಗ್ಮಾತು ಸೇರ್ಸೋ ಮುಠಾಳ ನಾನು
ನಾಲ್ಗೆ ತುಂಡಾಗೋದೇ ಮೇಲು


ಕದ್ದು ಕೇಳ್ಬೇಡಂತ ತಿವಿಯೋರ್ಗೆ
ಮೈಯ್ಯೆಲ್ಲ ಕಿವಿಯಂತೆ ಗೊತ್ತಾ?
ನಿದ್ದೆ ಕದಿಯೋ ಮಂದಿ ಇರ್ಬೋದು
ಕನ್ಸೇನ್ ಅವ್ರಪ್ಪನ್ಮನೆ ಸ್ವತ್ತಾ?


ಸುಮ್ನಿದ್ರೆ ಸೋಂಬೇರಿ, ಎಗ್ರಾಡಿದ್ರೆ ನರಿ
ಮೋಸಕ್ಕೆ ಬಲಿಯಾದ್ರೆ ಬನ್ನೂರ್ ಕುರಿ
ಗಳ್ಗೆಗೆ ಒಂದೊಂದು ಬಣ್ಣ ಹಚ್ಚೋಗಂಟ
ಏನ್ಮಾಡಿದ್ರೂ ಇಲ್ಲಿ ಎಲ್ಲ ಸರಿ


ಎಲ್ಲಪ್ಪ ಗುರುವೇ ನೆಮ್ದಿ ಇರೋ ಜಾಗ?
ನೀನಿರೋ ಜಾಗಾನೂ ಸಂತೆ ಸಿವ
ಕಾಸಿಗ್-ಕಾಸ್ ಕೂಡಿಟ್ಟು ತಂದಿವ್ನಿ ಒಪ್ಪುಸ್ಕೋ
ಹಿಡಿ ತುಂಬ ಕೊಟ್ಬುಡು ಸಂತೋಸವ..


ಮಾಡಿರೋ ತಪ್ಪಾದ್ರು ಏನುಂತ ಕೇಳೋ
ತಲೆ ಬಗ್ಸಿ ಇಡ್ತೀನಿ ಪಾದಕ್ಕೆ
ಉಸ್ರು ಉಸ್ರಿಗುವೆ ದಂಡ ಕಂಟೊಂಗಾಯ್ತು
ಪರ್ಮಾತ್ಮ ಹುಟ್ಟಿದ್ ಪಾಪಕ್ಕೆ...


                                    - ರತ್ನಸುತ 

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...