Monday 29 July 2013

ತೊಟ್ಟು ಹನಿಗಳು !!

ರಣರಂಗದಲ್ಲಿ
ಮರಣ ಮೃದಂಗ ಬಾರಿಸುತ್ತಿದ್ದವನ
ಕಣ್ಣಿಂದ ಜಾರಿದ ಕಂಬನಿ
ಕೊನೆ ಉಸಿರೆಳೆಯುತ್ತಿದ್ದ ಸೈನಿಕನ ಪಾಲಿಗೆ
ಗಂಗಾ ಜಲವಾಯಿತು
****
ಅಂದು
ರಾಜ್ಯ ಹಾಳಾಗಲು ರಾಜ ಕಾರಣ
ಇಂದು
ರಾಜಕಾರಣ
****
ಇಗೋ-ಅಗೋ ಎಂದು
ಸತಾಯಿಸುವ ಮಳೆಗಿಂತ
ನಿಗದಿತ ಸಮಯವಿರದಿದ್ದರೂ
ದಿನಕ್ಕೊಮ್ಮೆಯಾದರೂ ಬಂದೇ ಬರುವುದೆಂಬ
ನಂಬಿಕೆ ಉಳಿಸಿಕೊಂಡಿದ್ದ ಖಾಸಗಿ ಬಸ್ಸು ಲೇಸು
****
ಅಲೆಗಳೆದ್ದು
ಕಡಲಿನೊಳಗೆ ಮತ್ತೆ ಬಿದ್ದವು
ಕಡಲ ಮಡಿಲ ನೌಕೆ ಮೇಲೆ
ತೀರ ತಲುಪಲೆಂದು
****
ಮಂಡಿ ಊರಿದಾಗ
ಬೆನ್ನು ಬಾಗಿದಾಗ
ಒಡಲ ಹಾಸಿದಾಗ
ದೇವರಿಗೆ ಕಾಣಸಿಗುವುದು
ಬೆನ್ನ ಹಿಂದಿನ ಗುಟ್ಟು
ಮುಖವಾಡ ಬರೇ
ಬಣ್ಣದ ರಟ್ಟು

            --ರತ್ನಸುತ

1 comment:

  1. "ಮುಖವಾಡ ಬರೇ
    ಬಣ್ಣದ ರಟ್ಟು" ಕರೆಕ್ಟೂ...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...