Friday 1 November 2013

ಪುರಾಣ!! ಸರೀನಾ ??

ಸೀಮೆ ಹಾಕಿಕೊಂಡ ಕಡಲು
ತನ್ನ ತಾನೇ ಮೀರುವುದು
ಅನಿವಾರ್ಯಕೋ, ಅನುಕೂಲಕೋ ?
ಅಭಿಮಾನಕೋ, ಅನುಕಂಪಕೋ ?
ಕಿನಾರೆ ಸಾರುವ ಕಥೆ
ವಿಸ್ಮಯಕಾರಿ, ಭಯಾನಕ, ಭೀಕರ !!

ನೋಡುವ ಕಣ್ಣಿಗೆ
ಗೀಚುವ ಬೆರಳಿಗೆ
ಅಲೆಗಳೇ ಎಲ್ಲ, ಕಡಲ ವ್ಯಾಪ್ತಿ
ಆದರದರೊಡಲ ಗರ್ಭದಲಿ
ಕಂಪನ, ತಲ್ಲಣಗಳ
ಕಂಡವರ್ಯಾರು, ಉಂಡವರ್ಯಾರು ?

ಹರನ ಆತ್ಮಲಿಂಗವ
ಸ್ಪರ್ಶಿಸಿದ ಕೈ
ಒಂದು ಸೆರಗಿಗೆ ಆಸೆ ಪಟ್ಟರೆ
ಕೈ ಅಶುದ್ಧವೋ, ಆತ್ಮವೋ ??

ಒಬ್ಬನ ಉತ್ತಮನೆಂದು ಬಿಂಬಿಸಲು
ಮತ್ತೊಬ್ಬನ ನಿಕೃಷ್ಟನಾಗಿಸೋದು ಪುರಾಣ
ನನ್ನ ಸುತ್ತಲ ಜಗತ್ತು
ನಿಕೃಷ್ಟವಾಗೇ ಇರಲಿ ನಾನೂ ಸೇರಿ
ಪುರಾಣದ ಪಾಲಿಗೆ ಸತ್ತಂತಿರುವುದೇ ಲೇಸು !!

                                             -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...