Monday 22 July 2013

ದೇವರ ಆಟ !!!

ನನ್ನ ಜೀವನದ ಮಹತ್ತರ ಕ್ಷಣ. ಬಹಳ ದಿನಗಳ ಕನಸು ನನಸಾಗಿತ್ತು. "ಹೌದು" ನಾನೂ ಕಾರಿನ ಮಾಲಿಕನಾಗಿದ್ದೆ.

ನಾನು ಬೆಳೆದಿದ್ದೆಲ್ಲಾ ಅತ್ತೆ ಮಾವನ ಹಂಗಿನಲ್ಲೇ, ಅವರೇ ನನ್ನ ಸಾಕು ತಾಯಿ ತಂದೆ ಅಂದರೆ ತಪ್ಪಲ್ಲಾ .

ಕಾರು ಕೊಂಡ ಮರು ದಿನವೇ ನನ್ನ ತಂದೆಯೊಂದಿಗೆ ಮಾವನ ಮನೆಗೆ ಹೊರಟೆ .
ಹಿಂದಿನಿಂದಲೂ ಮಾವ ಹೇಳುತ್ತಿದ್ದರು "ನೀನು ಕಾರ್ ಕೊಂಡಾಗ ನನ್ನ ಒಂದು ರೌಂಡ್ ಹಾಕ್ಸ್ತೀಯೇನೋ?!!" ಅಂತ, ಆ ಕ್ಷಣ ಕೊನೆಗೂ ಬಂದಿತ್ತು .


ಬಾಗಿಲು ಬಡಿದೆ, ಅತ್ತೆ ಬಾಗಿಲು ತೆರೆ
ದ್ಲು. ಆಗೆಷ್ಟೇ ಎಲ್ಲಾ ಕೆಲಸ ಮುಗಿಸಿ ಸುಸ್ತಾದಂತೆ ಕಾಣ್ತಿದ್ದಿದ್ರಿಂದ ತೊಂದ್ರೆ ಯಾಕ್ ಕೊಡೋದು ಅಂತ  ಕಾಫಿ-ಗೇಫಿ ಬೇಡ ಅಂದ್ವಿ.

"ಮಾವ ಎಲ್ಲಿ?" ನಾ ಕೇಳಿದೆ
"ಒಳಗೆ ರೂಂ ಅಲ್ಲಿ ಮಲಗಿದ್ದಾರೆ, ನೆನ್ನೆಯಿಂದ ಸ್ವಲ್ಪ ಗ್ಯಾಸ್ ತ್ರಬಲ್ಲು, ಡಾಕ್ಟರ ಕಡೆ ತೋರ್ಸಿದ್ದಾಯ್ತು, ಈಗಷ್ಟೇ ಮಲಗಿದ್ರು" ಅಂದ್ಲು ಅತ್ತೆ.
ಮಾತಾಡ್ಸೋಣ ಅಂತ ರೂಂ ಬಾಗಿಲು ತೆರೆದೆ. ಆಯಾಸದಲ್ಲಿ ಮಲಗಿದ್ದವರ ಕಂಡು ಎಚ್ಚರಿಸುವ ಮನಸಾಗದೆ ಹಿಂದಿರುಗಿದೆ.


ಇನ್ನೇನು ಹೊರಡೋ ಸಮಯ. 

"ಮಾವ ಏಳೋ ತನ್ಕ ತಾಳೋ" ಅಂದ್ಲು ಅತ್ತೆ.
"ಹೊಸ ಕಾರು,ನಂಗೂ ಅಷ್ಟಾಗಿ ಓಡಿಸಿ ಅಭ್ಯಾಸ ಇಲ್ಲಾ, ಅದ್ಕೆ ಬೇಗ ಬೆಳ್ಕಿದ್ದಂಗೇ ಮನಗೆ ಹೋಗ್ಬೇಕು" ಅಂದೆ, ಅಪ್ಪ ಕೂಡ ತಲೆ ಆಡ್ಸಿದ್ರು.


ದಾರಿಯಲ್ಲೇ ದೊಡ್ಡಮ್ಮನ ಮನೆ, ಅವರನ್ನೂ ಮಾತಾಡಿಸುವ ಅಂತ ಅವರ ಮನೆಗೆ ಹೋಗಿ ಇನ್ನೇನು ಐದು ನಿಮಿಷ ಆಗಿತ್ತು ಅಷ್ಟೇ. ಅತ್ತೆ ಕಡೆಯಿಂದ ಕರೆ ಬಂತು.
ಅತ್ತೆ ಗಾಬರಿ ಆಗಿದ್ಲು. "ನಿನ್ ಮಾವ ಹೆಂಗೆಂಗೋ ಆಡ್ತಿದಾರೆ, ಬೇಗ ಬಾ" ಅಂತ ಲೈನ್ ಕಟ್ ಮಾಡಿದ್ಲು.
ನನಗೂ ಗಾಬರಿಯಾರಿ ಅಪ್ಪನಿಗೆ ವಿಷಯ ತಿಳಿಸಿದೆ.
ನನ್ನ ದೊಡ್ಡಮ್ಮನ ಮಗ "ನೀನು ಕಾರ್ ಓಡಿಸುವುದು ಬೇಡ" ಅಂತ ಹೇಳಿ ತಾನೇ ಡ್ರೈವ್ ಮಾಡ್ದ.


ಮನೆ ತಲುಪುವಷ್ಟರಲ್ಲಿ ಮಾವ ವಿಲಿ-ವಿಲಿ ಒದ್ದಾಡ್ತಿದ್ರು, ಎದೆ ಹಿಡ್ಕೊಂಡು ಚೀರಾಡ್ತಿದ್ರು.
ಬೇಗ ಆಸ್ಪತ್ರೆಗೆ ಕರೆದೊಯ್ಯುವ ಅಂತ ಮಾವನನ್ನ ಹಿಂದಿನ ಸೀಟಲ್ಲಿ ನನ್ನ ಹೆಗಲಿಗೆ ಒರಗಿಸಿ ಕೂರ್ಸಿದ್ರು.
ನಾನು ಆಗಾಗ ಅವರನ್ನ ತಟ್ಟಿ ಮಾತಾಡಿಸುವ ಪ್ರಯತ್ನ ಪಡ್ತಿದ್ದೆ, ಹತ್ತು ಬಾರಿ ಕೂಗಿದ್ರೆ ಒಮ್ಮೆ "ಆ" ಅಂತ ಅಂತಿದ್ರು .


ಆಸ್ಪತ್ರೆ ಬಂತು, ಸ್ಟ್ರೆಚ್ಚೆರ್ ಮೇಲೆ ಮಾವನನ್ನ ಎಮರ್ಜೆನ್ಸಿ ವಾರ್ಡ್ ಗೆ ಸಾಗಿಸಲಾಯ್ತು.
ಆ ಹೊತ್ತಿಗಾಗ್ಲೇ ಒದ್ದಾಟ ಜೋರಾಗಿತ್ತು.
ಡಾಕ್ಟರ, "ಕೈ ಕಾಲು ಹಿಡಿದುಕೊಳ್ಳಿ" ಅಂದ್ರು
ನಾನು ಕಾಲುಗಳನ್ನ ಹಿಡಿದೆ. ಅಪ್ಪ, ಅಣ್ಣ ಕೈ ಹಿಡ್ಕೊಂಡ್ರು.
ಡಾಕ್ಟರ್: "ಸ್ಮೋಕ್ ಮಾಡ್ತಿದ್ರ ಇವ್ರು?" ಇಂಜೆಕ್ಷನ್ ಅಲ್ಲಿ ಔಷದಿ ತುಂಬಿಸ್ಕೊಳ್ತಾ ಕೆಲಿದ್ರು.
ಹೌದು ಅಂದೆ.
ಸೂಜಿ ಚುಚ್ಚುತ್ತಲೇ ಮಾವ ಕೈ ಒದರಿದ್ರು, ರಕ್ತ ಛಲ್ಲಂತ ಚಿಮ್ಮಿತ್ತು, ಒದ್ದಾಟ ಇನ್ನೂ ಜೊರಾಯ್ತು.
ಡಾಕ್ಟರ "ಸ್ವಲ್ಪ ಎಲ್ರೂ ಹೊರಗಡೆ ಇರಿ" ಅಂದ್ರು 


ನಂಗೆ ಎದೆಯುಸಿರು ಶುರುವಾಯ್ತು. ಅಪ್ಪ ನನ್ನ ಸಮಾದಾನ ಪಡ್ಸಿದ್ರು.


ಹತ್ತು ನಿಮಿಷ ಕಳೆದು ಹೊರ ಬಂದ ಡಾಕ್ಟರ್ "ಅಮ್ ಸಾರೀ" ಅಂತ ಹೇಳಿ ಹೊರ್ಟೋದ್ರು.


ಆ ವೇಳೆಗೆ--


ಅಪ್ಪಳಿಸಿದ ಧಟ್ಟ ಅಲೆ
ಉಸಿರಾಟಕೆಡೆಗೊಡುತ್ತಿದ್ದಂತೆಯೇ
ಮತ್ತೊಂದಲೆ ಎದ್ದಿತ್ತು


ಒರೆಸುವ ಮುನ್ನವೇ
ಹಿಂದೆ ಸಾಲುಟ್ಟಿ

ಕಣ್ಣ ಹನಿ ಉಕ್ಕಿತ್ತು


ಚೀರಾಡುವ ಕೊರಳು
ನೋವ ಮೀರಿಸಲಾಗದ ಎತ್ತರಕ್ಕೆ
ಚೀರಿತ್ತು


ಹೃದಯ ಸಿಡಿದು ಬಿಡುವಷ್ಟು
ದುಃಖದ ಸಿಡಿಮದ್ದು
ಎದೆಯಲ್ಲಿ ತುಂಬಿತ್ತು


ಒಂದು ಜೀವ ಉಸಿರಾಟ ಮರೆತಿತ್ತು
ಮತ್ತೊಂದು ಜೀವ ಉಸಿರಾಡುತಲೇ ಸತ್ತಿತ್ತು ...... :((((
                                 

                                              --ರತ್ನಸುತ

4 comments:

  1. Nija no? Kalpane no? Oodi manassige bahala novaitu..

    ReplyDelete
    Replies
    1. Nija Prashanth sir. This a real incident which happened 5 years back :(

      Delete
  2. ಒಂದು ಮನೋವಿಧ್ರಾವಕ ಘಟನೆ ನನ್ನನ್ನುವಿಹ್ವಲವಾಗಿಸಿತು.. ಕಣ್ಣಂಚಿನಲ್ಲಿ ನೀರು...

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...