Tuesday 9 July 2013

ರೊಟೀನ್ ಹನಿಗಳು !!

ದಾರಾವಾಹಿಯ ನೋಡುತ್ತಾ ಹೆಚ್ಚಿದ ಈರುಳ್ಳಿಗೆ
ತಾನು ಕಣ್ಣೀರಿಗೆ ಹೊಣೆಯಲ್ಲಾ ಎಂಬ ಸಮಾದಾನವಿತ್ತು !!
*****

ಮಾರುಕಟ್ಟೆಯಲ್ಲಿ ಸತ್ತು ನಾರುತ್ತಿದ್ದ ಹೆಗ್ಗಣಕ್ಕೆ
ಸಹಭಾಗಿಯಾಗಿದ್ದ ತ್ಯಾಜ್ಯ ವಿಲೆವಾರಿಗೊಂಡು
ಕಾಗೆ, ಹದ್ದುಗಳ ಕೊಕ್ಕಿನ ಕುಕ್ಕು ತಕ್ಕ ಮಟ್ಟಿಗೆ ತಪ್ಪಿತು !!

*****


ಕೊಡ ತುಂಬಿತೆಂದು ಅತ್ತ ನಲ್ಲಿ ನಿಲ್ಲಿಸುವ ಹೊತ್ತಿಗೆ (ಉತ್ತರಾಖಂಡ ಸಮಸ್ಯೆ)
ಇತ್ತ ಒಲೆಯ ಮೇಲಿನ ಹಾಲು ಉಕ್ಕಿ ಹೋಯಿತು (ಬೋಧಗಯಾ ಸಮಸ್ಯೆ) 

*****

ಅತ್ತ ಮಗು ಗುಂಡಿನ ಸದ್ದು ಕೇಳಿದೊಡನೆ 
ಅಳುವುದನ್ನ ಒಮ್ಮೆಲೆ ನಿಲ್ಲಿಸಿತು 
ಮತ್ತೆಂದೂ ಅದು ಅಳಲೇ ಇಲ್ಲಾ !! (ಜಮ್ಮು ಕಾಶ್ಮೀರದ ಉಗ್ರತೆಯ ನೆನೆದು)

*****

ಅಕ್ಕಿ ಬೆಲೆ ಇಳಿಮುಖವಾದರೆ 
ಅನ್ನದ ಬೆಲೆ ಇಳಿಮುಖವಾದೀತೇ ??

*****

-:ಇದೀಗ ಬಂದ ಸುದ್ದಿ:- 
ಮುರಿಯಲು ಒಂದು ರೆಕಾರ್ಡು 
ಛಾಪಿಸಿದನೊಬ್ಬ ದುಬಾರಿ ವೆಡ್ಡಿಂಗ್ ಕಾರ್ಡು 

*****

-:ಮುಖ್ಯಾಂಶಗಳು:-
ಯಡಿಯೂರಪ್ಪ ಜೊತೆ ಬಿ.ಜೆ.ಪಿ ವರಿಷ್ಟರ ಸಂದಾನ 
ಆಗುವುದೇ ರಾಣ್ಬೀರ್ ದೀಪಿಕಾ ಕಲ್ಯಾಣ ??
ಸಭೆಯಲಿ ನಿದ್ದೆಗೆ ಜಾರಿ ಪ್ರಧಾನಿಗೆ ಅವಮಾನ 
ಕ್ರಿಕೆಟ್ ವೀರರಿಗೆ ತಲಾ ಕೋಟಿ ರುಪಾಯಿ ಬಹುಮಾನ 
ದೇಶದಲ್ಲಿ ಏರು ಪೇರಾಗುತ್ತಿದೆ  ಹವಾಮಾನ 
ಇಲ್ಲಿಗೆ ಈ ವಾರ್ತಾ ಪ್ರಸಾರ ಮುಗಿಸೋಣ
ಮತ್ತೆ ನಾಳೆ ಬೇಟಿಯಾಗೋಣ  


                                        --ರತ್ನಸುತ 

2 comments:

  1. Tumba chennagide Bharath... keep it up!

    ReplyDelete
  2. ಎಲ್ಲವೂ ಮನಸ್ಸಿನ ಆಳಕ್ಕೆ ಇಳಿವ ಸಂಗತಿಗಳೇ. ಭೇಷ್...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...