Thursday 24 October 2013

ಹವಾಮಾನಕೆ ಅವಮಾನ/ ಗುಣಗಾನ

ಬಣ್ಣ ಹಚ್ಚಿದೆ ಬಾನು
ನೂತನ ದಿನದಾಟಕೆ
ಹೊತ್ತೊತ್ತಿಗೊಂದೊಂದು ಪ್ರಕಾರದಲ್ಲಿ

ಇಂದೇಕೋ
ಶೋಕ ನಾಟಕವಿರಬೇಕು
ಜಾರಿಸದೆ ಕಣ್ಣಂಚಿನಲಿ
ಹಿಡಿದಿಟ್ಟಿದೆ ಕಂಬನಿಯ

ಆಸಕ್ತರೋ ನಿರಾಸಕ್ತರೋ
ಒಮ್ಮೆ ತಲೆಯೆತ್ತಿ
ಗಮನಿಸುವರು ಚೂರು

ಅಲ್ಲಿ ಶೋಕ ವಿಪರೀತಗೊಂಡರೆ
ಇಲ್ಲಿಯ ನಾಟಕಕ್ಕೆ ತೆರೆ
"ಅನಾವರಣ/ಅಂತ್ಯ "

ಆದರೊಬ್ಬಳಿದ್ದಾಳೆ,
ರೆಪ್ಪೆ ಅಲುಗಿಸದೆ ನೋಡುತ
ಅವಳೇ ಈ "ಧರೆ"

ನಾಟಕ ಸುಳ್ಳಾದರೆ
ಕೋಪ ಶಮನಕ್ಕೆ
ಉರುಳುವುದೊಂದೆರದು ಪ್ರಾಣ  //ಅವಮಾನ //

ನಿಜವಾದರೆ
ನಿಲ್ಲದ ಗುಣಗಾನ
ಪಾತ್ರಧಾರಿಗಳಿಗೆ ಸನ್ಮಾನ

                   -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...