Monday 19 May 2014

ಒಂದಿರುಳ ಕಥೆಯಲ್ಲ!!

ಕಪ್ಪು ಹಲಗೆಯ ಮೇಲೆ 
ಬಿಳಿಯಕ್ಷರ
ಸಿಪ್ಪೆ ಸುಲಿದರೆ ಹಿಂದೆ
ಮಧು ಸಾಗರ
ಸುತ್ತ ಕತ್ತಲು ಮೂಡಿ
ಸುಖಿ ಚಂದಿರ
ಜೋಡಿ ಬೆತ್ತಲ ಕೋಣೆ
ಮನ್ವಂತರ!!

ಹಕ್ಕು ಯಾರದು ಎಂದು
ಕಾದಾಡಿರಿ
ಸಿಕ್ಕ ಸಿಕ್ಕವ ಬಿಡದೆ
ಕಿಸೆಗಿರಿಸಿರಿ
ಒಂದು ಮಂಚಕೆ ಉಂಟು 
ನಾಲ್ಕು ಕಾಲು
ನಾಲ್ಕೂ ಒಂದಾದರದು
ಧನ್ಯ ಬಾಳು!!

ಉರುಳುರುಳಿದರೆ ಬಿಡಿ
ಸತ್ತು ಬಿಡಲಿ
ಊರ ತುಂಬ ಚಾಡಿ
ಹೇಳಿ ಬರಲಿ
ಕತ್ತು ಕೊಟ್ಟಿರಿ ಕೊನೆಗೆ
ಎದೆಯ ಒತ್ತಿ
ಬತ್ತೋ ಬೆವರಿಗೆ ಏಟು
ಅಹಂ ಭಕ್ತಿ!!

ಸಣ್ಣ ಪಿಸುಗುಟ್ಟುಗಳು
ಬೆಟ್ಟದಷ್ಟು
ಒಮ್ಮೊಮ್ಮೆ ಎಡವಟ್ಟು
ಆಗುವಷ್ಟು
ತುಟಿ ಬೀಗ ಜಡಿದರೆ
ಉಂಟು ಉಳಿವು
ಇಲ್ಲವಾದರೆ ನಡುವೆ
ಸ್ಥಗಿತ ಒಲವು!!

ರಂಪವಲ್ಲದ ಒಡಲ
ನಡು ಮಂಥನ
ಶಾಂತ ಚಿತ್ತಕೂ ಚೂರು
ರೋಮಾಂಚನ
ಗದ್ದೆ ರೊಚ್ಚಿಗೂ ಉಂಟು
ಹುಟ್ಟು ಗುಣವು
ಹದ್ದು ಮೀರದೇ ಉಳಿದು
ಎಂಥ ಗೆಲುವು?!!

                  -- ರತ್ನಸುತ

1 comment:

  1. ’ಬತ್ತೋ ಬೆವರಿಗೆ ಏಟು
    ಅಹಂ ಭಕ್ತಿ’
    ಎಂತ ಮಾತು ಕವಿವರ್ಯ!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...