Tuesday 13 August 2013

ಧುಸ್ವಪ್ನ !!!

ನನ್ನ ತುಂಟತನದ ಹಿಂದೆ
ಗಂಭೀರ ವಿಚಾರಗಳು
ತೆರೆದುಕೊಂಡ ಸುಳುವು ಹಿಡಿದು
ವಿಚಾರವಾದಿಯಾದವನು
ಗುರುವಾಗಿಸಿಕೊಂಡ ಎನ್ನ
ನನಗೇ ಅರಿಯದ ಹಾಗೆ
ಉನ್ನತನಾಗಿಸಿದ ನನ್ನ

ಕಾಣೆಯಾದವ ಒಮ್ಮೆ
ಪ್ರತ್ಯಕ್ಷ ಆಚಾನಕ್ಕು
ಹರಿದ ಬಟ್ಟೆ, ಗಡ್ಡ ಬಿಟ್ಟು
ಮೈಯ್ಯಿ ನಾರುತಿತ್ತು ಕೆಟ್ಟು
ಬುದ್ಧಿ ಹೀನ ಸ್ಥಿತಿಯಲ್ಲಿ
ಗುರುತು ಹಿಡಿದನು ನನ್ನ
ಕಾಲಿಗೆ ಬೀಳುವ ಮುನ್ನ

"ಭೂಮಿ ಗುಂಡಾಗಿದೆ
ಆದರೂ ಇದೇ ಕೊನೆಯಾಗಲಿ
ಮತ್ತೆ ನೀ ಕಣ್ಣಿಗೆ ಸಿಕ್ಕರೆ
ಕೊಲೆ ಒಂದು ನಡೆದ್ಹೋಗಲಿ"
ಹೀಗಂದು ಮಾಯವಾದ
ಇಷ್ಟೆಲ್ಲಾ ನಡೆದು ಹೋಯ್ತು
ಎಚ್ಚರವಾಗುವ ಮುನ್ನ !!!

("ಒಲವೇ ಜೀವನ ಲೆಕ್ಕಾಚಾರ" ಸಿನಿಮಾದ ಪ್ರೇರಣೆಯ ಸಾಲುಗಳು, ಅದು ಯಾಕೆ ಪ್ರೇರೇಪಿಸಿತೋ ದೇವರೇ ಬಲ್ಲ)


                           --ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...