Wednesday 29 January 2014

ಪ್ರಣಯ ಕವಿತೆ !!

ಪ್ರಣಯ ಕವಿತೆ 
ಬರೆದೆ ನಿನ್ನ ಹೆಸರಲೇ
ಜಪಿಸಿ ಕುಳಿತೆ 
ಕೊರೆವ ನಿನ್ನ ನೆನಪಲೇ
ಉಸಿರು ಎದೆಯೊಳಗೆ 
ನಡುಗಿ ಸಾಯುತಿದೆ 
ತೊದಲು ಮಾತಿನಲಿ 
ಹೇಗೆ ಹೇಳಲಿ 

ಪ್ರಣಯ ಕವಿತೆ ....             [೧]

ಕಾಲ ಮುಳ್ಳಿಗೂ ಕಾತರ 
ಏನು ಮುಂದಿನ ಯೋಜನೆ 
ಕಾದು ಕಾದು ಸಾಕಾಗಿದೆ 
ಮನಸಿಗೆ ಇದೇ ಯೋಚನೆ 
ಬಿಡಿಸಿ ಮತ್ತೆ ಬೆರೆಸಿ 
ಪೋಣಿಸೋದೆ ಪ್ರಾಣವ 
ಮೂರು ಮಾತೇ ಸಾಕು 
ಮರೆತು ಬಿಡಲು ಲೋಕವ 

ಪ್ರಣಯ ಕವಿತೆ....            [೨]

ಮಾತು ಮೀರಲು ಮೌನವಹಿಸುವೆ 
ನೀನು ತಡೆದು ನೋಡು 
ನನ್ನ ಸಾಲನು ಕದ್ದು ಆಲಿಸಿ 
ನೀನೂ ಒಮ್ಮೆ ಹಾಡು 
ಒಡೆದು ಮತ್ತೆ ಬರೆದು 
ಸಿದ್ಧವಾದ ಮುನ್ನುಡಿ      
ಚೂರು ಚೂರೇ ಸೆಳೆದ
ನೀನೇ ಮಾಯಾ ಗಾರುಡಿ

ಪ್ರಣಯ ಕವಿತೆ ............    [೩] 

                          -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...