Sunday 5 January 2014

ದಡ್ಡನ್ ಪದ

ಕಪ್ಪು ಕಾಗೆ 
ಕೆಂಪು ನಾಲ್ಗೆ 
ಮಾತ್ನಾಗ್ ಬಣ್ಣ ಇಲ್ಲ 
ಗ್ವಾಡೆ ಸುಣ್ಣ 
ಮೈಗೆ ಬಳ್ದ್ರೆ 
ಬಾಳು ಬದ್ಲಾಗಲ್ಲ 

ದೀಪ ಹಚ್ಚಿ 
ಕಾವ್ಲಿಟ್ರೇನು 
ಗೂಬೆ ಹಗ್ಲಾಗ್ ಕುರ್ಡು 
ಹಾರಾಡೋ 
ಗುಬ್ಬಚ್ಚಿಗ್ಳ್ದು 
ಪಂಜರ್ಬಾಳು ಬರ್ಡು 

ಮೂಸೆ ಒಳ್ಗೆ 
ಇರೋ ತನ್ಕ 
ಹೆಗ್ಣ ಕೂಡ ಮುದ್ದು 
ಕತ್ತೆ ಬಾಲ 
ಎಳಿಯೋಕೋದ್ರೆ 
ಉತ್ರ ಕೊಡ್ತೈತ್ ಒದ್ದು 

ಕಾಡು ಚಂದ 
ಅಂತ ಹೋದ್ರೆ 
ನಾಡು ಮೃಗಗಳ್ ಬೀಡು 
ಎಲ್ಲ ಕಷ್ಟ 
ನಮ್ಗೆ ಅಲ್ಲ 
ಕಾಣು ಕಂಡೋರ್ ಪಾಡು 

ಸಕ್ರೆ ಬಿದ್ದ ಬಾಯಿ 
ಬೇವಿನ ರುಚಿ 
ಮರಿಬಾರ್ದಂತೆ 
ಜೀವ್ನ 
ಮೂರ್ದಿನದ್ ನಾಟ್ಕ 
ಯಾಕೆ ಚಿಂತೆ ಗಿಂತೆ?

ಸಣ್ಣೊನ್ ಸ್ವಾಮಿ 
ತ್ಯಪ್ಪಗಿದ್ರೆ 
ಹಿಡ್ದು ಬುದ್ದಿ ಹೇಳಿ 
ನಾನೂ ನಿಮ್ಮೋನೇಯ 
ಮಧ್ಯ 
ಹಾಕ್ಕೋಬ್ಯಾಡಿ ಬೇಲಿ....

               -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...