Monday 29 December 2014

ಒಂದು ಸ್ಪೂರ್ತಿಯ ಹಿಡಿದು

ಹಚ್ಚಿಟ್ಟ ಬೆಂಕಿಯದು
ಮೈಗತ್ತಿದಾಗಲೇ

ಮರೆತಿದ್ದ ಉಡುಗೊರೆಯ ನೀಡಬೇಕಿತ್ತು
ಹಣೆಗೊಂದು ಮುತ್ತು

ಹೊಸೆದಿಟ್ಟ ದಾರ
ಕಂಕಣವ ಕಟ್ಟಿ
ನೋವಾಗದಂತೆ ಬಿಗಿಸಬೇಕಿತ್ತು
ನಡುದಾರ ಗಂಟು

ಲೆಕ್ಕ ಮರೆತಂತೆ
ಕನಸುಗಳ ವಿಂಗಡಿಸಿ
ಬಣ್ಣ ಹಚ್ಚುತ್ತಲೇ ಹರಡಬೇಕಿತ್ತು
ಎಣಿಸುತ್ತ ಕೂತು

ಹೆಮ್ಮರದ ಕೊಂಬೆಯಲಿ
ಹಕ್ಕಿ ಕಟ್ಟಿದ ಗೂಡ
ಹೆಕ್ಕಿ ತಂದ ನಾರ ಸೇರಬೇಕಿತ್ತು
ಕೂಡಿ ಹಾಡಿ ಜೋತು

ಮುನಿಸಿನಾಚೆಗೆ ಒಂದು
ಈಚೆಗೆ ಹಲವಾರು
ತೀರದ ಸಿರಿಯಲ್ಲಿ ಮುಳುಗಬೇಕಿತ್ತು

ಮುಗಿಯದಂತೆ ಮಾತು

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...